ಆವರ್ತನ

Author : ಗುರುರಾಜ್ ಸನಿಲ್

Pages 420

₹ 425.00




Year of Publication: 2021
Published by: ಕಾವ್ಯಸ್ಪಂದನಾ
Address: ಕಾವ್ಯಸ್ಪಂದನ ಪಬ್ಲಿಕೇಷನ್ ನಂ. 53, 5ನೇ ಟೆಂಪಲ್ ರಸ್ತೆ, ಸಿದ್ದಾಂತಿ ಬ್ಲಾಕ್ ಮಲ್ಲೇಶ್ವರಂ, ಬೆಂಗಳೂರು-560 003
Phone: 8073147961

Synopsys

‘ಆವರ್ತನ’ ಗುರುರಾಜ್ ಸನಿಲ್ ಅವರ ಕಾದಂಬರಿಯಾಗಿದೆ; ಗುರುರಾಜ್ ಸನಿಲ್ ಅವರೊಬ್ಬ ಖ್ಯಾತ ಉರಗತಜ್ಞ ಮತ್ತು ಸಾಹಿತಿಯಾಗಿ ನಾಡಿನಾದ್ಯಂತ ಪ್ರಸಿದ್ದರು. ಇವರು ತಮ್ಮ ವಿಶೇಷ ಜೀವನಾನುಭವಗಳಿಂದ ಈವರೆಗೆ ಹತ್ತು ವಿಭಿನ್ನ ಕೃತಿಗಳನ್ನು ಬರೆದು ಕನ್ನಡ ಸಾ ಸಾಹಿತ್ಯಲೋಕಕ್ಕೆ ಮಹತ್ವದ ಕೊಡುಗೆ ನೀಡಿದವರು. 'ಹಾವು ನಾವು (ಪರಿಷ್ಕೃತ ಮೂರು ಆವೃತ್ತಿಗಳು)' 'ದೇವರಹಾವು ನಂಬಿಕೆ. ವಾಸ್ತವ ಶಿಸ್ತವ' 'ನಾಗಬೀದಿ ವೀದಿಯೊಳಗಿಂದ' 'ಹುತ್ತದ ಸುತ್ತಮುತ್ತ' ವಿಷಯಾಂತರ' 'ಕಮರಿದ ಸತ್ಯಗಳು ಕೈಗಳು ಚಿಗುರಿದ ಸುದ್ದಿಗಳು' 'ನಾಗಬನವೆಂಬ ಸ್ವರ್ಗೀಯ ತಾಣ' ಎಂಬ ಕೃತಿಗಳೊಂದಿಗೆ ಕಥೆಗಾರರು ದರೂ ಆಗಿ 'ಗುಡಿ ಮತ್ತು ಬಂಡೆ' ಕಥಾಸಂಕಲನ ಹಾಗೂ 'ವಿವಶ' ಮತ್ತು 'ಆವರ್ತನ' ಕಾದಂಬರಿಗಳನ್ನು ಬರೆದು ಕಾದಂಬರಿಕಾರಾಗಿಯೂ ಗುರುತಿಸಿಕೊಂಡಿದ್ದಾರೆ. 'ಹಾವು ನಾವು' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2010ನೇ ಸಾಲಿನ, 'ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ ಲಭಿಸಿದೆ. "ನಾಗಬೀದಿಯೊಳಗಿಂದ" ಕೃತಿಯ 'ನಮ್ಮ ನಂಬಿಕೆ ನಾಗನಿಗೆ ವರವೇ. ಶಾಪವೇ?' ಎಂಬ ಮುಖ್ಯ ಲೇಖನವು ಮಂಗಳೂರು ವಿಶ್ವವಿದ್ಯಾನಿಲಯದ 2017ರ ಪ್ರಥಮ ಬಿ. ಕಾಂ. ವಿದ್ಯಾರ್ಥಿಗಳಿಗೆ ಹತ್ತನೆಯ ಪಠ್ಯವಾಗಿದೆ. ಸನಿಲ್ ಅವರ ನಾಲ್ಕು ಕೃತಿಗಳಿಂದ ಆಯ್ದ 18 ಲೇಖನಗಳು ಗೋವಾದ ಲೇಖಕಿ ಡಾ. ಸುಷಮಾ ಆರೂರು ಅವರಿಂದ ಕೊಂಕಣಿ ಭಾಷೆ(ದೇವನಾಗರಿ ಲಿಪಿ)ಗೆ ಅನುವಾದಗೊಂಡು, 'ಗಜಾಲಿ ಪೊಟಸರ್ಯಾಂಚ್ಯ: ಸರ್ಪ ಮೊಗಿಚೆ ಅಣಭವ!' ಎಂಬ ಕೃತಿಯ ರೂಪದಲ್ಲಿ 2020ರಲ್ಲಿ ಬೆಳಕು ಕಂಡಿದೆ.

About the Author

ಗುರುರಾಜ್ ಸನಿಲ್
(14 June 1968)

ಲೇಖಕ ಗುರುರಾಜ್ ಸನಿಲ್ ಅವರು ಮೂಲತಃ ಉಡುಪಿ ಜಿಲ್ಲೆಯ ತೆಂಕುಪೇಟೆಯವರು. ತಂದೆ ಶೇಷಪ್ಪ,  ತಾಯಿ ಸುಂದರಿ. ಪ್ರಾಥಮಿಕ ಶಿಕ್ಷಣ ಉಡುಪಿಯ ಕಡಿಯಾಳಿ ಶಾಲೆಯಲ್ಲಿ ಮತ್ತು ಪ್ರೌಢ ವಿದ್ಯಾಭ್ಯಾಸವನ್ನು ಮುಂಬೈ ಪೋರ್ಟ್ ಹೈಸ್ಕೂಲಿನಲ್ಲೂ ಪೂರೈಸಿದರು. ಹವ್ಯಾಸದೊಂದಿಗೆ ಇವರ ಉರಗ ತಜ್ಞರು. 25 ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದ ದಾಖಲೆ ಇವರದ್ದು. ಹಾವಿನ ಮೊಟ್ಟೆಗಳನ್ನು ಸಂಗ್ರಹಿಸಿ, ಕಾವು ನೀಡಿ ಮರಿಗಳನ್ನು ಮಾಡಿದ ನಂತರ ಅವುಗಳನ್ನು ಕಾಡಿಗೆ ಬಿಟ್ಟ ಪ್ರಸಂಗಗಳೂ ಇವೆ. "ನಮ್ಮ ಮನೆ ನಮ್ಮ ಮರ  ಸಂಸ್ಥೆಯೊಂದಿಗೆ ಈವರೆಗೆ 10ಸಾವಿರಕ್ಕೂ ಅಧಿಕ ಗಿಡಗಳನ್ನು ಬೆಳೆಸಿದ್ದಾರೆ.  ಕೃತಿಗಳು:  ಹಾವು ನಾವು , ಹಾವು ನಾವು, ದೇವರ ಹಾವು : ನಂಬಿಕೆ ...

READ MORE

Related Books