ಕೀಲುಗೊಂಬೆ

Author : ತ್ರಿವೇಣಿ

Pages 157

₹ 90.00




Year of Publication: 2016
Published by: ತ್ರಿವೇಣಿ ಪಬ್ಲಿಕೇಷನ್ಸ್
Address: # 1195, ಬಾಲಕೃಷ್ಣರಾವ್, ಚಾಮರಾಜಪುರಂ, ಮೈಸೂರು-570005

Synopsys

‘ಕೀಲುಗೊಂಬೆ’- ತ್ರಿವೇಣಿ ಅವರ ಕಾದಂಬರಿ. ಇಲ್ಲಿಯ ಕಥಾನಾಯಕಿ ಇನ್ನೂ ಅಪ್ರಾಪ್ತೆ ಇರುವಾಗಲೇ ಮದುವೆಯಾಗುತ್ತದೆ. ಆಟವಾಡುವ ವಯಸ್ಸಿನಲ್ಲಿ ಗಂಡನ ಕಾಮಕ್ಕೆ ಬಲಿಯಾಗುವ ದುರಂತ ಚಿತ್ರಣವಿದು. ಆದರೆ, ನಮ್ಮಲ್ಲಿ ಬೇರೂರಿದ ಬಲವಾದ ಭಾವನೆ ಎಂದರೆ-ಪತಿಯೇ ಪರದೈವ ಎಂಬುದು.

ಈ ಮಧ್ಯೆಯೂ ಪರಸ್ಪರರನ್ನು ಆರ್ಥೈಸಿಕೊಳ್ಳುವ ದಂಪತಿಗಳು ಇರುತ್ತಾರೆ ಎಂಬುದಕ್ಕೆ ಮಧುರವಾಣಿ ಹಾಗೂ ಆಕೆಯ ಪತಿಯ ಪ್ರಸ್ತಾಪವಿದೆ. ಕಂದಾಚಾರಗಳನ್ನು ಮೀರಬಾರದು ಎನ್ನುವ ರುಕ್ಮಿಣಮ್ಮ ಮತ್ತೊಂದೆಡೆ. ಒಟ್ಟಿನಲ್ಲಿ, ಸಮಾಜ ಬದಲಾಗುತ್ತಿದೆ ಎಂಬುದನ್ನು ಲೇಖಕಿ ಎಚ್ಚರಿಸುತ್ತಿದ್ದಾರೆ.  ಮಾತ್ರವಲ್ಲ; ಹೆಣ್ಣಿನ ಮೇಲೆ ಬಲತ್ಕಾರ ನಡೆಸುವುದು ಗಂಡಿನ ಹಕ್ಕಲ್ಲ ಎಂಬ ಸಂದೇಶವೂ ಇಲ್ಲಿದೆ. 

About the Author

ತ್ರಿವೇಣಿ
(29 July 1963 - 05 July 1963)

ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ದರಾದ ಅನುಸೂಯ ಶಂಕರ್ ರವರು ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು.  ತಂದೆ ಬಿ.ಎಮ್. ಕೃಷ್ಣಸ್ವಾಮಿ, ತಾಯಿ ತಂಗಮ್ಮ ಇವರ ಮಗಳಾಗಿ 1928 ರ ಸೆಪ್ಟಂಬರ್ 1 ರಂದು ಮೈಸೂರಿನಲ್ಲಿ ಇವರು ಜನಿಸಿದರು. ಹೈಸ್ಕೂಲ್ ವರೆಗಿನ ಶಿಕ್ಷಣ ಮಂಡ್ಯದಲ್ಲಿ ಹಾಗೂ ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಆಯಿತು. 1947ರಲ್ಲಿ ಮಹಾರಾಜಾ ಕಾಲೇಜಿನಿಂದ ಮನ:ಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು. ಕನ್ನಡದ ಕಣ್ವ ಬಿ.ಎಂ.ಶ್ರೀಯವರ ಸೋದರನ ಪುತ್ರಿಯಾಗಿದ್ದ ತ್ರಿವೇಣಿಯವರು ಸ್ತ್ರೀಯರು ಹೆಚ್ಚಾಗಿ ಬರೆಯದೇ ಇದ್ದ ಕಾಲದಲ್ಲಿ ಬರವಣಿಗೆ ಪ್ರಾರಂಬಿಸಿ ಕೆಲವೇ ವರ್ಷಗಳಲ್ಲಿ ಅಸಾಧಾರಣ ಜನಪ್ರಿಯತೆಯನ್ನು ಗಳಿಸಿದರು. 1953 ರಲ್ಲಿ ತ್ರಿವೇಣಿಯವರ ಮೊದಲನೆಯ ಕಾದಂಬರಿ ಪ್ರಕಟವಾಯಿತು. ಹತ್ತು ವರ್ಷಗಳಲ್ಲಿ ...

READ MORE

Related Books