ಶಾಮಣ್ಣ

Author : ಕುಂ. ವೀರಭದ್ರಪ್ಪ

Pages 688

₹ 395.00




Year of Publication: 2011
Published by: ಸಪ್ನಾ ಬುಕ್ ಹೌಸ್

Synopsys

ಕುಂ. ವೀರಭದ್ರಪ್ಪ ಅವರ ಜನಪ್ರಿಯ ಕಾದಂಬರಿಗಳಲ್ಲಿ ಒಂದು. ಈ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ಈ ಕಾದಂಬರಿಯ ಬಗ್ಗೆ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಅವರು ’ಕುಂವೀ ಅವರ ಈ ಕಾದಂಬರಿಯ ಕಾಮಿಕ್ ಶೈಲಿಯ ಶಕ್ತಿಪೂರ್ಣತೆ ಅಪೂರ್ವವಾಗಿದೆ. ಶ್ರೇಷ್ಠ ಸಾಹಿತ್ಯವನ್ನು ಓದುವಾಗ ಖುಷಿ ಅನ್ನಿಸಕೂಡದು ಅಥವಾ ನಗಲೇಕೂಡದು ಎಂದು ನಂಬಿರುವ ಜೀವನದ್ವೇಷಿಗಳನ್ನು ಬಿಟ್ಟರೆ ಇನ್ನೆಲ್ಲ ಓದುಗರು 'ಶಾಮಣ್ಣ' ಓದಿ ಖುಷಿ ಪಡಬಹುದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಿರಿಯ ಲೇಖಕ ಡಾ. ಕೆ.ಎಂ. ಮರುಳಸಿದ್ದಪ್ಪ ಅವರು ’ಇದು ಮಹಾಕಾವ್ಯದ ರಚನ ವಿನ್ಯಾಸ ಹಾಗೂ ಆಶಯಗಳನ್ನು ಒಳಗೊಂಡಿರುವ ಆಧುನಿಕ ಕಾದಂಬರಿ. ಇಲ್ಲಿ ಬಳಕೆಯಾಗಿರುವ ಗಂಭೀರ, ಪ್ರೌಢ, ಅಲಂಕಾರಯುಕ್ತ ಭಾಷೆಗೆ ನಿರ್ದಿಷ್ಟ ಉದ್ದೇಶವಿದೆ. ಇದು ಲೇಖಕರ ಪಾಂಡಿತ್ಯ ಪ್ರದರ್ಶನವಲ್ಲ. ಕಥೆಯ ಬಹಿರಾಡಂಬರದ ಆಂತರ್ಯದಲ್ಲಿ ಹುದುಗಿರುವ ಹುಸಿಯನ್ನು ತೀಕ್ಷ್ಣವಾದ ವ್ಯಂಗ್ಯ, ವಿಡಂಬನೆಗಳಿಗೆ ಗುರಿ ಮಾಡುವುದೇ ಈ ಶೈಲಿಯ ಉದ್ದೇಶ, ಆದ್ದರಿಂದ ಇದೊಂದು ಅಣಕು ಮಹಾಕಾವ್ಯದಂತಿದೆ. ದುರಂತ ಪ್ರಹಸನವೇ ಮನುಷ್ಯ ಜೀವನದ ನಿಜವಾದ ಸ್ವರೂಪವೆಂಬುದನ್ನು ಇಲ್ಲಿ ಪಾತ್ರಗಳ ಮೂಲಕ ಪ್ರತಿಪಾದಿಸಲಾಗಿದೆ’ ಎಂದು ಶ್ಲಾಘಿಸಿದ್ದಾರೆ.

ಮತ್ತೊಬ್ಬ ವಿಮರ್ಶಕ ಡಾ.ಚಂದ್ರಶೇಖರ ನಂಗಲಿ ಅವರು ’ಸತ್ಯದ ಸಮ್ಯಕ್ ದರ್ಶನವನ್ನು ಮನಗಾಣಿಸುವ ಅನುಭವಾತೀತ ಕಾದಂಬರಿ(ಶಾಮಣ್ಣ)ಯನ್ನು ಕೊಟ್ಟ ಕೀರ್ತಿಗೆ ಕುಂವೀ ಪಾತ್ರರಾಗಿದ್ದಾರೆ. ರಸೋಮನ್ ಶೈಲಿ ಈ ಕಾದಂಬರಿಯಲ್ಲಿದೆ’ ಎಂದಿದ್ದಾರೆ.

About the Author

ಕುಂ. ವೀರಭದ್ರಪ್ಪ
(01 October 1953)

ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು. ಶಿವರಾಜ್ ...

READ MORE

Related Books