ಕ್ರೌರ್ಯ (ಕಾದಂಬರಿ)

Author : ಅರವಿಂದ ಮಾಲಗತ್ತಿ

Pages 91

₹ 90.00




Year of Publication: 2016
Published by: ಅಲ್ಲಮ ಪ್ರಕಾಶನ
Address: ಕಾರಟಗಿ, ಕೊಪ್ಪಳ ಜಿಲ್ಲೆ
Phone: 7899404101

Synopsys

ಪ್ರೊ. ಅರವಿಂದ ಮಾಲಗತ್ತಿ ಅವರ ಕಾದಂಬರಿ-ಕ್ರೌರ್ಯ. ಕಾದಂಬರಿಯ ಕಥಾ ವಸ್ತು ವೈವಿಧ್ಯತೆಯಿಂದ ಕೂಡಿದೆ. ಕಥೆಯ ನಿರೂಪಣೆ ಆಕರ್ಷಕ ಹಾಗೂ ಪರಿಣಾಮಕಾರಿಯಾಗಿದೆ. ಸಾಮಾಜಿಕ ಸನ್ನಿವೇಶಗಳ ಜೋಡಣೆಯು ಕಥೆಯ ಬಂಧವನ್ನು ಬಿಗಿಗೊಳಿಸಿದೆ. ಸಂಭಾಷಣೆಯೂ ಸಹ ಪರಿಣಾಮಕಾರಿಯಾಗಿ ಅತೀ ವಾಚ್ಯವೆನಿಸದು. ಇಂತಹ ಸಾಹಿತ್ಯಕ ಅಂಶಗಳನ್ನು ಒಳಗೊಂಡ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.

About the Author

ಅರವಿಂದ ಮಾಲಗತ್ತಿ
(01 August 1956)

ಡಾ.ಅರವಿಂದ ಮಾಲಗತ್ತಿಯವರು 01-08-1956ರಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು. ತಂದೆ ಯಲ್ಲಪ್ಪ, ತಾಯಿ ಬಸವ್ವ.  ಹುಟ್ಟೂರಿನಲ್ಲಿ ಪದವಿವರೆಗೂ ವ್ಯಾಸಂಗ ಮಾಡಿ, ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಪಿಎಚ್.ಡಿ ಪದವೀಧರರಾದ ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.   ಡಾ. ಅರವಿಂದ ಮಾಲಗತ್ತಿ ಕನ್ನಡ ಸಾಹಿತ್ಯದಲ್ಲಿ ಒಂದು ಗಮನಾರ್ಹ ಹೆಸರು. ವಿಮರ್ಶೆ, ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ಹೆಸರು ಮಾಡಿದವರು. ಕಾವ್ಯದ ಮೂಲಕ ಸಾಹಿತ್ಯಲೋಕಕ್ಕೆ ಪರಿಚಿತರಾದ ಇವರು ನಂತರ ಕವನ, ಕಾದಂಬರಿ, ...

READ MORE

Related Books