ರಾಗ ಬೃಂದಾವನ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 241

₹ 140.00




Year of Publication: 2007
Published by: ಸುಧಾ ಎಂಟರ್‍ ಪ್ರೈಸಸ್
Address: #3036, 5ನೇ ಮುಖ್ಯರಸ್ತೆ, ಬಿ.ಎಸ್.ಕೆ 2ನೇ ಹಂತ, 14ನೇ ಕ್ರಾಸ್ ರೋಡ್, ತ್ಯಾಗರಾಜ್ ನಗರ, ಬೆಂಗಳೂರು-560083
Phone: 98454 49811

Synopsys

ಕಾದಂಬರಿಕಾರ್ತಿ ಹೇಳುತ್ತಾರೆ ‘ರಾಗ ಬೃಂದಾವನ’ ಕಾದಂಬರಿ ಓದಿದ ಓಬ್ಬ ಓದುಗರ ಪ್ರತಿಕ್ರಿಯೆ ಹೀಗಿತ್ತು: ಮಹಾನ್ ಗಾಯಕ ಸೈಗಾಲ್, ಅಪ್ರತಿಮ ಸಂಗೀತ ನಿರ್ದೇಶಕ ನೌಷಾದ್ ರಾಗ ಸಂಯೋಜನೆಯಲ್ಲಿ ‘ಷಹಜಹಾನ್’ ಚಿತ್ರದಲ್ಲಿ ಹಾಡಿದ ‘ಜಗ್ ದಿಲ್ ಹಿ ಟೂಟ್ ಗಯಾ, ಹಮ್ ಜೀಕೆ ಕ್ಯಾ ಕರೇಂಗೆ’ ಎನ್ನುವ ಅಮರ ಗೀತೆ. ಇನ್ನೊಂದು ವಿಸ್ಮಯ ಸಂಗತಿಯೆಂದರೆ ಸೈಗಾಲ್ ಶವಯಾತ್ರೆ ನಡೆದಾರ ರಸ್ತೆಯಲ್ಲಿ ಗೋಷ್ಟಿಗಾನವಾಗಿ ಹೊರ ಹೊಮ್ಮಿದ್ದು ‘ಜಬ್ ದಿಲ್ ಹಿ ಟೂಟ್ ಗಯಾ...’ ಭಗ್ನವಾಗಿದ್ದು ಸೈಗಾಲ್ ಹೃದಯ ಮಾತ್ರವೇ ಅಲ್ಲ. ಆ ಹಾಡಿನ ಮೋಡಿಗೆ ಒಳಗಾದ ಅಸಂಖ್ಯಾತ ಹೃದಯಗಳು ಕೂಡ. ಹಾಗೆಯೇ ಈ ಕಾದಂಬರಿ ಓದಿನ ನಡುವೆ ನನ್ನ ಹೃದಯವೂ ಭಗ್ನವಾಗಿತ್ತು. ಆದರೆ ಸುಖಾಂತವಾಗಿ ನನ್ನ ಹೃದಯದಲ್ಲಿ ರಾಗ ಮೂಡಿಸಿದೆ. ಇಂತಹ ಹಲವಾರು ಪ್ರತಿಕ್ರಿಯೆಗಳ ಸಂಗಮವೇ ಈ ಕಾದಂಬರಿ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books