ಲೇಖಕಿ ಸಾಯಿಸುತೆ ಅವರು ಬರೆದ ಕಾದಂಬರಿ-ಆಶಾ ಸೌರಭ. ಕಟ್ಟಾ ಸಂಪ್ರಾಯದ ಭಾರತವು ವಿದೇಶಿ ಸಂಪ್ರದಾಯಗಳನ್ನು ಒಪ್ಪುವುದಿಲ್ಲ. ವಿದೇಶದಲ್ಲಿದ್ದರೆ ಗೌರವವೂ ಹೆಚ್ಚು ಎಂಬ ಕಥಾನಾಯಕ ತಂದೆಯ ಆಸೆಯನ್ನು ಮಗ ಗೋಕುಲ್ ಈಡೇರಿಸುವುದಿಲ್ಲ. ವಿದೇಶದಲ್ಲಿಯ ವಾತಾವರಣ ಹಿಡಿಸದೇ ಆತ ಭಾರತಕ್ಕೆ ಮರಳುತ್ತಾನೆ. ಮತ್ತೇ ಇಲ್ಲಿಯ ಸಂಸ್ಕೃತಿ-ಸಂಪ್ರಾಯಗಳ ಮಧ್ಯೆ ಏರ್ಫಡುವ ಗೊಂದಲದ ಬದುಕು ಇಲ್ಲಿಯ ಕಥಾ ವಸ್ತು.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...
READ MORE