ಪರಿಮಳದ ಉರುಳು

Author : ತ.ರಾ.ಸು. (ತ.ರಾ. ಸುಬ್ಬರಾವ್)

Pages 136

₹ 60.00




Year of Publication: 2008
Published by: ಓಂ ಶಕ್ತಿ ಪ್ರಕಾಶನ
Address: ನಂ. 748/12, 58ನೇ ತಿರುವು, 4ನೇ ಹಂತ, ರಾಜಾಜಿನಗರ, ಬೆಂಗಳೂರು-560010
Phone: 080 23354619

Synopsys

ಹಿರಿಯ ಕಾದಂಬರಿಕಾರ ತ.ರಾ.ಸು ಅವರ ಸಾಮಾಜಿಕ ಕಾದಂಬರಿ ‘ಪರಿಮಳದ ಉರುಳು’. ನಿಜ ಜೀವನ ಘಟನೆಯಾಧಾರಿತ ಕಾದಂಬರಿ. ಭೂತ, ಪಿಶಾಚಿಗಳು ಇವೆ ಎಂದು ನಂಬುವ ಜನರು ಕೆಲವರಿದ್ದಾರೆ. ಇವು ಕೇವಲ ವಿಕೃತ ಮಾನಸಿಕ ವಿಕಾರಗಳು ಎಂದು ವಿಜ್ಞಾನಿಗಳು ಹೇಳುತ್ತಾರೆ. ಇಂಥ ವೈಜ್ಞಾನಿಕ ವಿವರಣೆಗಳೇನಿದ್ದರೂ, ಇವೆಲ್ಲವನ್ನೂ ಮೀರಿದ ಅತೀತ ಶಕ್ತಿ ಇದ್ದೇ ಇದೆ ಎಂಬುದು ಹಿರಿಯರ ನಂಬಿಕೆ. ಮನುಷ್ಯರ ನಂಬಿಕೆ, ಅಪನಂಬಿಕೆಗಳ ತೋಳಲಾಟವೇ ಈ ಕಾದಂಬರಿಯ ವಸ್ತು.

About the Author

ತ.ರಾ.ಸು. (ತ.ರಾ. ಸುಬ್ಬರಾವ್)
(12 June 1906 - 10 April 1984)

ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...

READ MORE

Related Books