ಶಬರಿ

Author : ಬರಗೂರು ರಾಮಚಂದ್ರಪ್ಪ

Pages 272

₹ 176.00




Year of Publication: 2016
Published by: ಅಂಕಿತ ಪುಸ್ತಕ
Address: #53 ಶಾಮಸಿಂಗ್ ಸಂಕೀರ್ಣ, ಗಾಂಧಿಬಜಾರ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004
Phone: 0802661 7100

Synopsys

ಡಾ. ಬರಗೂರು ರಾಮಚಂದ್ರಪ್ಪನವರ ಕಾದಂಬರಿ-ಶಬರಿ. ಕಥಾವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ. ರಾಮಾಯಣದ ಶಬರಿಯನ್ನು ಹೊಸ ನೆಲೆಯಲ್ಲಿ ಚಿತ್ರಿಸಿದ್ದು, ಈ ಕಾದಂಬರಿ ಆಧರಿಸಿ ಚಲನಚಿತ್ರವೂ ಆಗಿದೆ. ಹೆಣ್ಣಿನ ಅತಿ ಭಾವುಕತೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.

About the Author

ಬರಗೂರು ರಾಮಚಂದ್ರಪ್ಪ
(18 October 1946)

ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕತೆ-ಕಾದಂಬರಿ-ಕಾವ್ಯಗಳಂತಹ ಸೃಜನಶೀಲ ಕೃತಿಗಳ ಜೊತೆಗೆ ಚಿಂತನ ಪರ ಬರಹ, ವಿಮರ್ಶೆಗಳ ಮೂಲಕ ಹೆಸರಾದವರು. ರಾಮಚಂದ್ರಪ್ಪ ಅವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ, ನಿರ್ದೇಶಕ ಆಗಿದ್ದರು. ಸಾಹಿತ್ಯದಷ್ಟೇ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನಿಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ವಿಭಿನ್ನ ಹಾದಿ ಹಿಡಿದವರು. ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ...

READ MORE

Reviews

ಕಾದಿಹಳು ಬರಗೂರರ 'ಶಬರಿ'!

ಹೊಸತು- ಅಕ್ಟೋಬರ್‌-2005

 

ಅರ್ಥಹೀನ ಸಂಪ್ರದಾಯ ಮತ್ತು ಆಧುನಿಕತೆ, ಶೋಷಣೆ ಹಾಗೂ ಬಂಡಾಯಗಳ ಮುಖಾಮುಖಿಯ ಸ್ವರೂಪಗಳ ಶೋಧನೆ ಬರಗೂರು ರಾಮಚಂದ್ರಪ್ಪನವರ ಕತೆ-ಕಾದಂಬರಿ ಗಳ ಪ್ರಧಾನ ಆಸಕ್ತಿ 'ಶಬರಿ' ಕಾದಂಬರಿ ಸಹ ಇದಕ್ಕೆ ಅಪವಾದವಲ್ಲ. ಗಾರ್ಕಿ- ಬ್ರೆಕ್ಟ್‌ನ 'ತಾಯಿ'ಯಂತೆ ಇಲ್ಲಿನ ಶಬರಿ ಸಹ ಅನಕ್ಷರಸ್ಥ ನೆಲೆಯಿಂದ ದಿಟ್ಟತನದ ವ್ಯಕ್ತಿತ್ವವನ್ನು ಪಡೆಯುವ ಕ್ರಮ ಕಾದಂಬರಿಯ ಕೇಂದ್ರ, ಕಾಯುವಿಕೆ – 'ಕುದುವಿಕೆ'ಯ ರೂಪಕವಾಗಿ ಶಬರಿ ಕಾಣುತ್ತಾಳೆ, ವೈಚಾರಿಕತೆ ಮತ್ತು ಜೀವನಾನುಭವಗಳ ಒಟ್ಟಾರೆ ಚಿತ್ರ ಎಷ್ಟೋ ಪ್ರಗತಿಶೀಲ ಕಾದಂಬರಿಗಳಂತೆ ಇಲ್ಲಿಯೂ ಸಾರ್ಥಕ ಓದಿನ ಅನುಭವ ಕೊಡುವುದಿಲ್ಲ. ಕಾದಂಬರಿಯ ಕಥನದ ಒಡಲಲ್ಲಿ ಸೇರಿಹೋಗಿರುವ ಕಾವ್ಯದ ಸಾಲುಗಳು, ಅಕ್ಕಮಹಾದೇವಿಯ ವಚನಗಳು 'ಪ್ರಯೋಗ'ದ ಹಂತಕ್ಕೆ ಸೀಮಿತವಾಗಿದೆ ಎನಿಸುತ್ತದೆ. 'ಜನಸಂಸ್ಕೃತಿ ಹಾಗೂ ಜನಪರ ರಾಜಕಾರಣದ ಅಂತರ್‌ಸಂಬಂಧ'ದ ಸ್ವರೂಪವನ್ನು ಹಲವು ನೆಲೆಗಳಲ್ಲಿ ಚರ್ಚಿಸುವ ಪ್ರಗತಿಪರ ಕಾದಂಬರಿಯಾಗಿ 'ಶಬರಿ' ಗಮನ ಸೆಳೆಯುತ್ತದೆ.

Related Books