ಮಧ್ಯಘಟ್ಟ

Author : ಶಿವಾನಂದ ಕಳವೆ

Pages 248

₹ 225.00




Year of Publication: 2020
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪೀಕರ್ ಬೀದಿ, ಹುಬ್ಬಳ್ಳಿ- 580020
Phone: 0836-2367676

Synopsys

ಕಗ್ಗಾಡಿನ ನಡುವೆ ಒಂದು ಹಳ್ಳಿ ಬದುಕನ್ನು ಅರಿಯುತ್ತಾ ಅರಸಿ ಹೋದಾಗ ಕಂಡ ನೋಟಗಳನ್ನು ಈ ಕಾದಂಬರಿಯಲ್ಲಿ ಸರೆಹಿಡಿದಿದ್ದಾರೆ ಶಿವಾನಂದ ಕಳವೆ. ಕೇರಳ ತುದಿಯಿಂದ ಮಧ್ಯ ಘಟ್ಟ ಕೆಳಗಿನ ಕೇರಿಗೆ ಹತ್ತು ದಿನಗಳ ಕಾಲ ಒಂಬತ್ತು ನದಿಗಳನ್ನು  ದಾಟಿ ಪುಟ್ಟ ಮಕ್ಕಳ ಜೊತೆ ಬಂದವಳು ಭೂದೇವಿ. ಶಿರಸಿ ಕಡೆ ಮನುಷ್ಯರ ತಿನ್ನೊ ಜನ ಇದ್ದರೆಂಬ ಭಯದಲ್ಲಿ ಅಳುಕುತ್ತ ಬಂದವಳು, ಕಾಡಿನ ಕತ್ತಲಲ್ಲಿ ದಿನ ಕಳೆದ ಜೀವನ ವೃತ್ತಾಂತ ದೊಡ್ಡದು. ಪಶ್ಚಿಮ ಘಟ್ಟದ ಪರಿಸರವನ್ನು ತೆರೆದಿಡುವ ಕಥೆಯಿದು. ಇದರೊಂದಿಗೆ ಕಾಡಿನ ಪರಿಸರವನ್ನು ಬಿಂಬಿಸುವ ಕಥಾವಸ್ತುವನ್ನು ಹೊಂದಿದ್ದು, ಜೊತೆಗೆ, ಕಾಡು ಮಧ್ಯೆ ನಡೆಯುವ ಅನಾಹುತಕಾರಿ ಘಟನೆಗಳ ಮೂಲಕ ಕಾಡನ್ನು ಹೇಗೆ ಹಾಳು ಮಾಡಲಾಗುತ್ತಿದೆ ಎಂಬ ವಸ್ತುವೂ ಇದರಲ್ಲಿದೆ. ಕಥಾವಸ್ತು, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿಯಿಂದ ಇಲ್ಲಿಯ ಕಥೆಯು ಓದುಗರ ಗಮನ ಸೆಳೆಯುತ್ತದೆ. 

 

 

 

About the Author

ಶಿವಾನಂದ ಕಳವೆ

ಶಿವಾನಂದ ಕಳವೆ ಅವರು ಶಿರ್ಸಿ ಬಳಿಯ ಕಳವೆ ಗ್ರಾಮದವರು. ವೃತ್ತಯಿಂದ ಪತ್ರಕರ್ತರು. ಪರಿಸರ ಜಾಗೃತಿ ಮೂಡಿಸುವ ಬರೆಹಗಳು ಇವರ ವೃತ್ತಿ ವೈಶಿಷ್ಟತೆ. ಶಿರಸಿ ಸಮೀಪದ ನೀರ್ನಳ್ಳಿಯ ‘ಮಲೆನಾಡ ಮಳೆಕೇಂದ್ರ’ದ ರೂವಾರಿಯೂ ಹೌದು. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಅಲ್ಲಿಯ ಕೃಷಿ, ಪರಿಸರ, ಪರಿಸರ, ಜನಜೀವನಗಳನ್ನು ದಾಖಲಿಸಿದ್ದಾರೆ. ಈ ಪ್ರವಾಸದ ಬರವಣಿಗೆ ‘ಕಾಡುನೆಲದ ಕಾಲಮಾನ’. ದೇಸೀ ಜ್ಞಾನದ ವಿವಿಧ ಮಜಲುಗಳ ಅಧ್ಯಯನ ನಡೆಸಿದ್ದಾರೆ.  ಮುಡೇಬಳ್ಳಿ, ಮುಳ್ಳೆಹಣ್ಣು (ಸಂಪದ.ನೆಟ್ ಅಂತರ್ಜಾಲ ಪತ್ರಿಕೆ), ಬಹುಧಾನ್ಯ (ಉದಯವಾಣಿ), ದಾಟ್ ಸಾಲು (ನೀರ ಸಂರಕ್ಷಣೆಯ ಕಾರ್ಯದ ದಾಖಲಾತಿ)-ಇವು ಅಂಕಣಗಳ ಶೀರ್ಷಿಕೆಗಳು.  ಪ್ರಮುಖ ಕೃತಿಗಳು: ಕಾನ್ ಗೌರಿ, ಗೌರಿ ಜಿಂಕೆಯ ಆತ್ಮಕಥೆ, ಅರಣ್ಯ (ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿತ), ಅರಣ್ಯ ಜ್ಞಾನದ ...

READ MORE

Conversation

Related Books