ಧರ್ಮರಾಯನ ಸಂಸಾರ

Author : ಶಿವರಾಮ ಕಾರಂತ

Pages 331

₹ 175.00




Year of Publication: 2014
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

ಧರ್ಮರಾಯನ ಸಂಸಾರ-ಡಾ. ಶಿವರಾಮ ಕಾರಂತರ ಕಾದಂಬರಿ. ದುಷ್ಟತನ, ದುಶ್ಚಟ, ಅನಾಚಾರಗಳಿಗೆ ಹೆಸರಾಗಿದ್ದ ವ್ಯಕ್ತಿ ಮಹಾಬಲಯ್ಯ ಸಂಪ್ರದಾಯಸ್ಥರ ಮನೆತನದಲ್ಲಿ ಹುಟ್ಟಿ ಬೆಳೆದಿದ್ದ ಪತ್ನಿ-ಸರಸ್ವತಿ. ಈ ಮದುವೆಯಿಂದ ಅವನ ಜೀವನ ವಿಧಾನ ಅಥವಾ ಮನೋಧರ್ಮದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಸರಸ್ವತಿಯ ತಾಯಿಗೂ ಮಗಳ ಪಾಡು ಕಂಡು ಆತಂಕವಿತ್ತು. ತಾಯಿ, ಮಗಳ ಮನೋದೈಹಿಕ ಸಂಕಟಗಳನ್ನು ಕಾದಂಬರಿ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದೆ.

ಸಂಪ್ರದಾಯಸ್ಥ ಹೆಣ್ಣು ಸರಸ್ವತಿಯ ಮನಸ್ಸು ತನ್ನ ಗಂಡನ ವಿರುದ್ಧ ಸೇಡು ತೀರಿಸಲು ಹವಣಿಸುತ್ತದೆ. ತನ್ನ ಬಾಳಿನಲ್ಲಿ ಆಕಸ್ಮಿಕವಾಗಿ ಸಂಧಿಸಿದ ವ್ಯಕ್ತಿ ನಾಗಪ್ಪಯ್ಯ ಎಂಬ ತರುಣನೊಂದಿಗೆ ಕೂಡಿ ಗರ್ಭ ಧರಿಸುತ್ತಾಳೆ. ಇದರಿಂದ ತನಗೆ ಬರಬಹುದಾದ ವಿಪತ್ತನ್ನು ಧೈರ್ಯದಿಂದ ಎದುರಿಸಲು ಸಿದ್ದವಾಗುತ್ತಾಳೆ. ಆ ಸಂದರ್ಭ ಬರುವ ಮೊದಲೇ ಮಹಾಬಲಯ್ಯ ಕೊಲೆಗೀಡಾಗುತ್ತಾನೆ. ಸರಸ್ವತಿ ತನ್ನ ತವರಿಗೆ ಹಿಂದಿರುಗಿ, ತನ್ನ ಕತೆಯನ್ನು ತಾಯಿಗೆ ಅರಹುತ್ತಾಳೆ. ತಾಯಿ ಮಗಳನ್ನು ಕ್ಷಮಿಸುತ್ತಾಳೆ. ಸಾಮಾಜಿಕ ಅನ್ಯಾಯದ ವಿರುದ್ಧ ಸಂಪ್ರದಾಯಸ್ಥ ಮನೆತನದ ಹೆಣ್ಣು ಮಗಳು ನಡೆಸಿದ ಹೋರಾಟ, ಪಟ್ಟ ಸಂಕಟ, ಓದುಗರ ಮನಮುಟ್ಟುವಂತಿದೆ. ಸಂಪ್ರದಾಯಕ್ಕೆ ವಿರುದ್ದವಾದರೂ, ಕಥಾನಾಯಕಿ ಸರಸ್ವತಿ ತುಳಿದ ಹಾದಿ ಕ್ಷಮಾರ್ಹವಾದದ್ದು ಎಂಬ ನಿಲುವನ್ನು ಕಾದಂಬರಿ ಪ್ರತಿಪಾದಿಸುತ್ತದೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1972ರಲ್ಲಿ (ಪುಟ: 316) ಈ ಕಾದಂಬರಿಯನ್ನು ಮೊದಲು ಪ್ರಕಟಿಸಿತ್ತು.

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books