ದುರ್ಗದ ಬಿಚ್ಚುಗತ್ತಿ

Author : ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)

Pages 235

₹ 1.00




Year of Publication: 1938
Published by: ವೈ.ಟಿ. ಕುಲಕರ್ಣಿ
Address: ಹಾವೇರಿ

Synopsys

ಶ್ರೀ ಮುರುಗೀಶ ಮಹಿಮೆ ಕುರಿತಂತೆ ಕಾದಂಬರಿಕಾರ ಗಳಗನಾಥ (ವೆಂಕಟೇಶ ತಿರಕೋ ಕುಲಕರ್ಣಿ) ಅವರು ಬರೆದ ಕಾದಂಬರಿ-ದುರ್ಗದ ಬಿಚ್ಚುಗತ್ತಿ. ಶರೀರ ಸಂರಕ್ಷಕ ಸಾಹಿತ್ಯ, ಶೀಲ ಸಂವರ್ಧನ ಸಾಹಿತ್ಯ ಹಾಗೂ ವೈರಾಗ್ಯ ಉತ್ಪಾದಕ ಸಾಹಿತ್ಯಗಳ ಪೈಕಿ ಶ್ರೀ ಮುರುಗೀಶ ಮಹಿಮೆಯು ಶೀಲ ಸಂವರ್ಧಕ ಸಾಹಿತ್ಯದಡಿ ವಿಕಸಿತಗೊಂಡಿದೆ ಎಂದು ಲೇಖಕರು ಹೇಳಿದ್ದಾರೆ. ಆಂತರ್ಯದಲ್ಲಿ ವೈರಾಗ್ಯ ಉತ್ಪಾದಕ ಸಾಹಿತ್ಯವೂ ಹೌದು. ಜೀವನದಲ್ಲಿ ಶಿಸ್ತು ಕಲಿಸುವ, ಜೀವನದ ಆರ್ಥ ತಿಳಿಸುವ ಸಾಹಿತ್ಯವೂ ಇದಾಗಿದೆ. ಅಂತಹ ಜೀವನವನ್ನು ಸವೆಸಿದವರು ಶ್ರೀ ಮುರಗೀಶ ಗುರುಗಳು ಎಂಬ ಭಕ್ತಿ ಭಾವದ ಐತಿಹಾಸಿಕ ಕಾದಂಬರಿ ಇದು.

About the Author

ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)
(05 January 1869 - 22 April 1922)

ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...

READ MORE

Related Books