ಸತಿಯೊಬ್ಬಳು ಪತಿಯಾದವನು ಮಡಿದಾಗ, ಅವನ ಚಿತೆಗೆ ಬಲವಂತದಿಂದ ನೂಕಲ್ಪಟ್ಟು, ಅದೇ ಜನರಿಂದ ಗುಡಿ ಕಟ್ಟಿಸಿಕೊಂಡು 'ಮಹಾಸತಿ' ಎನಿಸಿಕೊಂಡರೂ, ದೇಹದ ಬಯಕೆಯಿಂದ ಅತೃಪ್ತಿಗೊಂಡು ಪ್ರೇತಸ್ವರೂಪಿಯಾಗಿ ಅಲೆಯುತ್ತಿದ್ದಾರೆ, ಎಂಬ ವಿಡಂಬನೆ ಕಾದಂಬರಿಯ ಕಥಾ ವಸ್ತು. ಅತೃಪ್ತ ಮತ್ತು ಅಸಮ ದಾಂಪತ್ಯ ಜೀವನದಿಂದ ನೊಂದವರೆಲ್ಲ ಈ ಮಹಾಸತಿಯ ಗುಡಿಗೆ ಸುತ್ತು ಬಂದು, ತಮ್ಮ ದಾಂಪತ್ಯ ಜೀವನ ಸುಗಮವಾಗಲೆಂದು ಹರಕೆ ಹೇಳಿಕೊಳ್ಳುತ್ತಿದ್ದ ವಿಪರ್ಯಾಸ ಕತೆಯ ಹಂದರ. ನಮ್ಮ ದೇಶದ ಹಲವೆಡೆ ಇಂದಿಗೂ ಅಲ್ಲಲ್ಲಿ ಅಸ್ತಿತ್ವದಲ್ಲಿರುವ 'ಸತಿಪದ್ದತಿ'ಯ ಸಾಮಾಜಿಕ ಅನ್ಯಾಯವನ್ನು ಕತೆ ಸೂಚ್ಯವಾಗಿ ತಿಳಿಸುತ್ತದಲ್ಲದೆ, ನಮ್ಮ ಜನರ ಧಾರ್ಮಿಕ ಮೂಢನಂಬಿಕೆಯನ್ನು ಅನಾವರಣಗೊಳಿಸುವ ಸನ್ನಿವೇಶವನ್ನು ಸೃಷ್ಟಿಸಿದೆ. ಕತೆಯ ಅಂತ್ಯ ಅವಾಸ್ತವಿಕ, ನಾಟಕೀಯ ಘಟನೆ, ದೃಶ್ಯಗಳಿಂದ ಕೂಡಿದ್ದರೂ ಕಾದಂಬರಿಯ ವಿಶಿಷ್ಟ ತಂತ್ರ ಗಮನಾರ್ಹವಾಗಿದೆ. ಮೂಢನಂಬಿಕೆಯಿಂದ ಜಡ್ಡುಗಟ್ಟಿದ್ದ ಮನಸ್ಸನ್ನು ಬಡಿದೆಬ್ಬಿಸುವ ನಿಟ್ಟಿನಲ್ಲಿ ಕಾದಂಬರಿ ಯಶಸ್ವಿಯಾಗಿದೆ.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MOREಸರಸಮ್ಮನ ಸಮಾಧಿ | Sarasammana Samadhi | Part-1 | Lakshmi Hegde | Cine Kannada