ಮೂಜನ್ಮ

Author : ಶಿವರಾಮ ಕಾರಂತ

Pages 327

₹ 165.00




Year of Publication: 2012
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

ಮೂಜನ್ಮ-ಡಾ. ಶಿವರಾಮ ಕಾರಂತರ ಕಾದಂಬರಿ. ಭಾರತ ದೇಶದ ಸ್ವಾತಂತ್ರ್ಯ ಪೂರ್ವದ ಚರಿತ್ರೆ, ಸ್ವಾತಂತ್ರ್ಯಾನಂತರದ ರಾಜಕೀಯ ಕುರಿತು ವಿಶೇಷ ಬೆಳಕನ್ನು ಚೆಲ್ಲುತ್ತದೆ. ಕಥಾನಾಯಕ ಚಂದ್ರಕಾಂತ ಬಾಪಟ್ ಎಂಬಾತ ಪತ್ನಿ ಚಂಪಾವತಿ ಮಧ್ಯೆ ವಿರಸವಿರುತ್ತದೆ. ಆದರೂ, ದೇಶದ ಸ್ವಾತಂತ್ರ್ಯ ಚಳವಳಕ್ಕೆ ಧುಮುಕಿ ಚಂದ್ರಕಾಂತ ಗುಪ್ತ ಎಂಬ ಹೆಸರಿನಿಂದ ರಚನಾತ್ಮಕ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾನೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ, ಅಧಿಕಾರಕ್ಕಾಗಿ ಆಸೆಪಡದೆ, ಆಡಳಿತದ ಆಗುಹೋಗುಗಳನ್ನು ದೂರದಿಂದಲೇ ಪರಿಶೀಲಿಸುತ್ತಾನೆ. ಕುಟಿಲ ರಾಜಕಾರಣಿಗಳ ಅಸೂಯೆಯಿಂದಾಗಿ ಕೊಲೆಗೀಡಾಗುತ್ತಾನೆ. ಅವನು ಮಡಿದ ಬಳಿಕ, ಅವನ ದ್ವಿತೀಯ ಪತ್ನಿ ನಳಿನಿ ಗುಪ್ತ ಅವನ ಜೀವನ ಚರಿತ್ರೆಯನ್ನು ಶೋಧಿಸುವ ಕೆಲಸದಲ್ಲಿ ತೊಡಗಿದಾಗ, ಚಂದ್ರಕಾಂತ ಗುಪ್ತನ ಮೊದಲ ಪತ್ನಿ ಮತ್ತು ಆಕೆಯ ಮಗಳು ಇಂದಿರೆಯನ್ನು ಸಂಧಿಸುತ್ತಾಳೆ. ಅವರೆಲ್ಲರೂ, ಪರಸ್ಪರರನ್ನು ಪ್ರೀತ್ಯಾದರಗಳಿಂದ ಉಪಚರಿಸುತ್ತಾರೆ. ಕತೆಗಾಗಿಯೇ ಒಂದಿಷ್ಟು ಕಥಾಂಶವನ್ನು ಪೋಣಿಸಿದಂತಿರುವ ಈ ಕಾದಂಬರಿ ಮುಖ್ಯತಃ ಭಾರತ ದೇಶದ “ಅತಂತ್ರ ಭಾರತ, ಸ್ವತಂತ್ರ ಭಾರತ ಮತ್ತು ಕುತಂತ್ರ ಭಾರತ'ದ ರಾಜಕೀಯ ನೋಟಗಳನ್ನುಸಾಂಕೇತಿಕವಾಗಿ ಸೂಚಿಸುತ್ತದೆ. 

ಬೆಂಗಳೂರಿನ ಐಬಿಎಚ್. ಪ್ರಕಾಶನವು 1974ರಲ್ಲಿ (ಪುಟ: 292)  ಈ ಕಾದಂಬರಿಯನ್ನು ಮೊದಲು ಪ್ರಕಟಿಸಿತ್ತು.  

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books