ರಾಗಮಾಲಿಕೆ

Author : ಹೆಚ್.ಜಿ. ರಾಧಾದೇವಿ

₹ 100.00




Published by: ಶ್ರೀ ಲಕ್ಷ್ಮಿ ವೆಂಕಟೇಶ್ವರ ಪ್ರಕಾಶನ
Address: ನಂ.298,6ನೇ ಕ್ರಾಸ್ ತ್ರಿವೇಣಿ ರಸ್ತೆ, ಯಶವಂತಪುರ,ಬೆಂಗಳೂರು -56002

Synopsys

ಖ್ಯಾತ ಕಾದಂಬರಿಗಾರ್ತಿ ಹೆಚ್.ಜಿ.ರಾಧಾದೇವಿ ಅವರ ಸಾಮಾಜಿಕ ಕಾದಂಬರಿ ‘ರಾಗಮಾಲಿಕೆ’. ಈ ಕಾದಂಬರಿಯ ಕಥಾನಾಯಕಿ ಯಶೋಧ. ಹೆಣ್ಣು ಮಕ್ಕಳು ಎಷ್ಟೇ ಓದಿರಲಿ ತಂದೆ ತಾಯಿಗೆ ಅವರ ಮದುವೆ ಮಾಡಿ ಕಳಿಸಿದರೆ ಸಮಾಧಾನ. ಇಲ್ಲಿಯೂ ಹಾಗೆ ಯಶೋಧಾಳ ತಾಯಿ ಲಲಿತಮ್ಮನಿಗೆ ಬೇಗ ಮಗಳ ಮದುವೆ ಮಾಡಿದರೆ, ಮಗ ಗೋಪಾಲ ಇಷ್ಟಪಟ್ಟ ಸರಳನ್ನು ಮನೆತುಂಬಿಸಿಕೊಳ್ಳುವ ಯೋಜನೆ. ಬಿಎ , ಬಿಎಡ್ ಓದಿ ಸರಕಾರಿ ಹೈಸ್ಕೂಲಿನಲ್ಲಿ ಉಪಾಧ್ಯಾಯಿನಿಯಾಗಿ ಕೆಲಸ ಮಾಡಿ ಆರು ಸಾವಿರ ಸಂಬಳ ಎಣಿಸುತ್ತಿದ್ದರು. ಯಶೋಧಾಳಿಗೆ ಯಾವುದೇ ಸಂಬಂಧ ಕೊಡಿ ಬರುತ್ತಿರಲಿಲ್ಲ. ಕೊನೆಗೂ ಒಂದು ಸಂಬಂಧ ಕೂಡಿಬಂದು ಮದುವೆಯಾಗುತ್ತದೆ... ಅವಳ ಜೀವನದ ಮತ್ತೊಂದು ಅಧ್ಯಾಯ ಇಲ್ಲೇ ತೆಗೆದುಕೊಳ್ಳುತ್ತದೆ.

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books