ಚಂದ್ರಕಾಂತಾ ಮತ್ತು ಚಂದ್ರಕಾಂತಾ ಸಂತತಿ ಸರಣಿ ಖ್ಯಾತಿಯ ಬಾಬೂ ದೇವಕಿನಂದನ ಖತ್ರಿ ಅವರ ರೋಚಕ ಕಾದಂಬರಿ ಭೂತನಾಥ. ಈ ಕೃತಿಯನ್ನು ಲೇಖಕ ನಾಗ ಹೆಚ್ ಹುಬ್ಳಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ದುರದೃಷ್ಟವಶಾತ್ ದೇವಕಿ ನಂದನ್ ಖತ್ರಿಯವರು ಈ ಕಾದಂಬರಿ ಪೂರ್ಣಗೊಳಿಸುವ ಮೊದಲೇ ಕಾಲವಾದರು . ಅವರ ಮಗ ದುರ್ಗಾಪ್ರಸಾದ್ ಖತ್ರಿಯವರು ಇದನ್ನು ಪೂರ್ಣಗೊಳಿಸಿದರು.
ಲೇಖಕ ನಾಗ ಎಚ್. ಹುಬ್ಳಿ ಅವರು ಎಲೆಕ್ಟ್ರಾನಿಕ್ ಡಿಪ್ಲೊಮಾ ಪದವೀಧರರು. ನಂತರ ಪತ್ರಿಕೋದ್ಯಮದಲ್ಲೂ ಪದವಿ ಪೂರೈಸಿದ್ದಾರೆ. ಕೆಲಕಾಲ ಪತ್ರಿಕೆಗಳಲ್ಲಿ ಕೆಲಸ ಮಾಡಿ ಸದ್ಯ ರಾಂಚಿ( ಜಾರ್ಖಂಡ್)ಯಲ್ಲಿ ಪತ್ರಿಕಾ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ಇವರ ಆಸಕ್ತಿ ಕ್ಷೇತ್ರ ಅಧ್ಯಯನವಾಗಿದ್ದು, ದೇಶದ ವಿವಿಧೆಡೆಗಳ ಆದಿವಾಸಿ ಜನಾಂಗದ ಬದುಕು ಸಂಸ್ಕೃತಿಗಳ ಕುರಿತು ಎರಡು ದಶಕಗಳಿಂದ ವಿಶೇಷ ಅಧ್ಯಯನ ನಡೆಸುತ್ತಿದ್ದಾರೆ. ಸುಮಾರು 10-15 ಪುಸ್ತಕಗಳು ಪ್ರಕಟವಾಗಿದ್ದು, ಕೆಲ ಪುಸ್ತಕಗಳನ್ನು ಅನುವಾದವೂ ಮಾಡಿದ್ದಾರೆ. ...
READ MORE