ಜೀವನ ಸಂಧ್ಯ

Author : ಬೇಲೂರು ರಾಮಮೂರ್ತಿ

Pages 200

₹ 60.00




Year of Publication: 2000
Published by: ಪ್ರಕಾಶ ಸಾಹಿತ್ಯ
Address: ಪ್ರಕಾಶ ಸಾಹಿತ್ಯ, ಬೆಂಗಳೂರು

Synopsys

‘ ಜೀವನ ಸಂಧ್ಯ’ ಬೇಲೂರು ರಾಮಮೂರ್ತಿ ಅವರ ಕಾದಂಬರಿಯಾಗಿದೆ. ಕಾದಂಬರಿಯ ಹೆಸರೇ ಹೇಳುವಂತೆ ಇದು ಇಳಿವಯಸ್ಸಿನಲ್ಲಿ ನಡೆಯುವ ಘಟನೆಗಳ ಸರಮಾಲೆ. ಶೇಖರಪ್ಪ ಮತ್ತು ರತ್ನಮ್ಮ ದಂಪತಿಗಳಿಗೆ ಇಬ್ಬರು ಮಕ್ಕಳು, ರವಿ ಮತ್ತು ಮುರಳಿ. ಶೇಖರಪ್ಪ ದಂಪತಿಗಳು ರವಿ ಮನೆಯಲ್ಲೇ ಇರುವಾಗ ಅವರ ವಯೋಮಾನಕ್ಕೆ ತಕ್ಕ ಹಾಗೆ ಕೆಲವು ಕಿರಿಕಿರಿಗಳು ನಡೆಯುತ್ತವೆ. ಆದರೂ ಸಹಿಸಿಕೊಂಡೇ ಹೋಗುತ್ತಿರುತ್ತಾರೆ. ಮಕ್ಕಳಿಗೆ ಹುಷಾರಿಲ್ಲದಿರುವುದರಿಂದ ಕೆಲವು ದಿನ ಅಪ್ಪ ಅಮ್ಮನನ್ನು ಕಳಿಸು ಎಂದು ಮುರುಳಿ ಹೇಳಿದಾಗ ರವಿ ಇಬ್ಬರನ್ನೂ ಕಳಿಸಲಾಗುವುದಿಲ್ಲ ಒಬ್ಬರನ್ನು ಕಳಿಸುತ್ತೀನಿ ಎಂದು ತಾಯಿಯನ್ನು ಮುರುಳಿಯ ಮನೆಗೆ ಕಳಿಸಿ ತಂದೆಯನ್ನು ತನ್ನ ಮನೆಯಲ್ಲೇ ಉಳಿಸಿಕೊಳ್ಳುತ್ತಾನೆ. ಒಬ್ಬೊಬ್ಬ ಮಗನ ಮನೆಯಲ್ಲಿ ಇರುವ ಶೇಖರಪ್ಪ ರತ್ನಮ್ಮ ಅವರ ಚಿಂತೆಗಳು, ಆತಂಕಗಳು, ಏಕಾಂತವಾಗಿ ಇರಬೇಕಾದ ಸ್ಥಿತಿ ಇವುಗಳನ್ನು ಬಹಳ ಸರಳವಾಗಿ ವಿವರಿಸಿರುವ ಕೃತಿ ಜೀವನಸಂಧ್ಯ. ಮತ್ತೆ ದಂಪತಿಗಳು ಒಂದಾಗಿ ಒಂದೇ ಮನೆಯಲ್ಲೇ ಇದ್ದರೆ ಎನ್ನುವುದು ಕುತೂಹಲ.

About the Author

ಬೇಲೂರು ರಾಮಮೂರ್ತಿ
(30 June 1950)

ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು.  ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು.  ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.  ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...

READ MORE

Related Books