ಕ್ಷಮೆಯಿರಲಿ ತಂದೆ

Author : ಉಷಾ ನವರತ್ನರಾಂ



Published by: ಓಂ ಶಕ್ತಿ ಪ್ರಕಾಶನ
Address: ನಂ:748/12, 58ನೆ ಅಡ್ಡರಸ್ತೆ,4ನೇ ವಿಭಾಗ,ರಾಜಾಜಿ ನಗರ, ಬೆಂಗಳೂರು_560010

Synopsys

ಕಾದಂಬರಿಗಾರ್ತಿ ಉಷಾ ನವರತ್ನರಾಂ ಅವರ ಸಾಮಾಜಿಕ ಕಾದಂಬರಿ ‘ಕ್ಷಮೆಯಿರಲಿ ತಂದೆ’. ಈ ಕಾದಂಬರಿ ಆರಂಭದಿಂದ ಕೊನೆಘಟ್ಟದವರಿಗೂ ಕುತೂಹಲಭರಿತವಾಗಿ ಹೆಣೆಯಲ್ಪಟ್ಟಿದೆ.ಇದರಲ್ಲಿ ಬರುವ ಪದ್ಮಮ್ಮಾ,ಲಕ್ಷ್ಮಮ್ಮಾ ಅವರ ಮಗ ಸೀತಾರಾಮನಿಂದ ಪ್ರಾರಂಭವಾಗುವ ಕತೆ,ಮನುಷ್ಯ ಹುಟ್ಟಿಬಂದಮೇಲೆ ಅದೆಷ್ಟು ಕಷ್ಟ ಅನುಭವಿಸಬೇಕಾಗುತ್ತದೆಯೋ ಎಂದು ಅನಿಸದೇ ಇರಲಾರದು. ಸಮಸ್ಯೆಗಳ ಕೇಂದ್ರವಾಗುವ ಬದುಕನ್ನು‌ ನವಿರಾಗಿ ಬಗೆಹರಿಸುವ ಇವರ ಕಥಾ ಹಂದರವುಳ್ಳ ಕಾದಂಬರಿಯು ಎಲ್ಲರ ಮೆಚ್ಚುಗೆ ಗಳಿಸಿದೆ.

About the Author

ಉಷಾ ನವರತ್ನರಾಂ
(23 November 1939 - 10 October 2000)

ಲೇಖಕಿ ಉಷಾ ನವರತ್ನರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ಎಂ.ವಿ. ಸುಬ್ಬರಾವ್. ತಾಯಿ- ಶಾಂತಾ. ಪ್ರಾರಂಭಿಕ ಶಿಕ್ಷಣವನ್ನು ಶಿವಮೊಗ್ಗದ ಮೇರಿ ಇಮ್ಯಾಕುಲೇಟ್ ಕಾನ್ವೆಂಟ್ ಹಾಗೂ ಬೆಂಗಳೂರಿನ ಮಹಿಳಾ ಸೇವಾ ಸಮಾಜದಲ್ಲಿ ಪೂರ್ಣಗೊಳಿಸಿದರು. ಆನಂತರ ಮೌಂಟ್ ಕಾರ್ಮಲ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯ ಹಾಗೂ ಇತಿಹಾಸದಲ್ಲಿ ಪದವಿ ಪಡೆದರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪೂರೈಸಿದರು. ವಿದ್ಯಾರ್ಥಿನಿಯಾಗಿದ್ದಾಗಲೇ ಹಲವು ಲೇಖನಗಳನ್ನು ಪ್ರಕಟಿಸಿದರು. ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಅಂಕಣಗಾರ್ತಿಯಾಗಿದ್ದು, ಗೆಳತಿ ಮತ್ತು ಉಷಾ ಪತ್ರಿಕೆಗಳ ಸಂಪಾದಕಿಯಾಗಿದ್ದರು. ಮಹಿಳಾ ಸೇವಾ ಸಮಾಜದಲ್ಲಿ ಅಧ್ಯಾಪಕಿಯಾಗಿ 27 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ನಾಲ್ಕು ವರ್ಷ ರೀಜನಲ್ ಫಿಲಂ ಸೆನ್ಸಾರ್ ...

READ MORE

Related Books