ಗೋವಾದೇವಿ

Author : ಬಸವರಾಜ ಕಟ್ಟೀಮನಿ

Pages 295

₹ 1.00




Year of Publication: 1955
Published by: ಶಾರದಾ ಪ್ರಕಟನಾಲಯ
Address: ಅರಳೇಪೇಟೆ ಬೆಂಗಳೂರು-2

Synopsys

ಸುಶಿಕ್ಷಿತ ಹಾಗೂ ಸುಸಂಸ್ಕೃತ ಎಂದು ಹೇಳಿ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆದವರ ಅತೀ ಸಣ್ಣತನವನ್ನು ಬಯಲು ಮಾಡುವ ಬಸವರಾಜ ಕಟ್ಟೀಮನಿ ಅವರ ಕಾದಂಬರಿ-ಗೋವಾದೇವಿ.

ಸಮಾಜದ ಮುಗ್ದರನ್ನು ದಾರಿ ತಪ್ಪಿಸುವವರ ಪೈಕಿ ಸ್ವಘೋಷಿತ ಇಲ್ಲವೇ ಸಮಾಜದ ಗಣ್ಯರು ಎಂದು ಊರು ಹೊಡೆಯುವವರೇ ಆಗಿರುತ್ತಾರೆ ಎಂಬ ಸಂದೇಶವೂ ಈ ಕೃತಿಯಲ್ಲಿದೆ. ಕಾದಂಬರಿಯ ರಚನಾ ವಿಧಾನದಲ್ಲಿ ಹೊಸತನವಿದೆ.

About the Author

ಬಸವರಾಜ ಕಟ್ಟೀಮನಿ
(05 October 1919 - 23 October 1989)

ಬಸವರಾಜ ಕಟ್ಟೀಮನಿಯವರು ಬದುಕು ಹಾಗೂ ಸಾಹಿತ್ಯದಲ್ಲೂ  ಕ್ರಾಂತಿಕಾರಿಯಾಗಿದ್ದರು. 1919 ಅಕ್ಟೋಬರ್‌ 5 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಲಾಮರಡಿ ಗ್ರಾಮದಲ್ಲಿ ಜನಿಸಿದರು. ಅವರ ಮೊದಲ ಕಥೆ ’ಕಾರವಾನ್’, ಕಟ್ಟೀಮನಿಯವರ ಮೊದಲೆರಡು ಕಾದಂಬರಿಗಳು ಸ್ವಾತಂತ್ರ್ಯ ಹೋರಾಟವನ್ನು ಕುರಿತಾಗಿ ಬರೆದಂಥವು. ಆ ಬಳಿಕ ಅವರು ಸಮಾಜದಲ್ಲಿ ನಡೆಯುತ್ತಿರುವ ಕಾರ್ಮಿಕ ಶೋಷಣೆ, ಸ್ತ್ರೀಶೋಷಣೆ, ಬಡವರ ಶೋಷಣೆ, ದಲಿತರ ಶೋಷಣೆ—ಇವೆಲ್ಲವಗಳ ವಿರುದ್ಧ ಕಟುವಾಗಿ ಬರೆದಿದ್ದಾರೆ.  ಕಥಾ ಸಂಕಲನ - ಸೆರೆಯಿಂದ ಹೊರಗೆ, ಆಗಸ್ಟ್ ಒಂಬತ್ತು, ಗುಲಾಬಿ ಹೂ, ಜೋಳದ ಬೆಳೆಯ ನಡುವೆ, ಜೀವನ ಕಲೆ, ಸುಂಟರಗಾಳಿ, ಸೈನಿಕನ ಹೆಂಡತಿ, ಹುಲಿಯಣ್ಣನ ಮಗಳು, ಗರಡಿಯಾಳು. ನಾಟಕ ...

READ MORE

Related Books