‘ಗುರಿ’ ಲೇಖಕಿ ಎ.ಸರಸಮ್ಮ ಅವರ ಸಾಮಾಜಿಕ ಕಾದಂಬರಿ. ಈ ಕಾದಂಬರಿಗೆ ಪ್ರಕಾಶಕರಾದ ಉಮೇಶ್ ನಾಗಮಂಗಲ ಅವರು ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ತಿಳಿಸುತ್ತಾ ‘ನಾವು ಜವಾಬ್ದಾರಿಯುತವಾದ ಜೀವನ ಸಾಗಿಸಲು ನಮ್ಮ ಬಾಳಿಗೊಂದು ಗುರಿ” ಇರಬೇಕು. ಗುರಿಯನ್ನು ತಲುಪಲು ನೀತಿ ಮಾರ್ಗದಲ್ಲಿ ಸಾಗುತ್ತ ಸ್ವಾರ್ಥ, ದುರಾಸೆ, ಸ್ವಪ್ರತಿಷ್ಟೆಗಳಿಲ್ಲದೆ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸುತ್ತ ಶ್ರದ್ಧೆ, ಪ್ರಾಮಾಣಿಕತೆಯಿಂದ ಶ್ರಮಿಸಿ "ಗುರಿ” ಮುಟ್ಟಿದಾಗ ದೇಶದೇಳಿಗೆ ಕಾರಣವಾಗುತ್ತದೆ ಎನ್ನುತ್ತಾರೆ.. ಇಂತಹ ಅದ್ಭುತ ಎಳೆಯನ್ನಿಟ್ಟುಕ್ಕೊಂಡು ಸರಸಮ್ಮ ಅವರು ತಮ್ಮ ಗುರಿ ಕಾದಂಬರಿ ರಚಿಸಿದ್ದಾರೆ.
ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ. ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...
READ MORE