ಶ್ರಾವಣ ಸಿರಿಸಂಜೆ

Author : ಹೆಚ್.ಜಿ. ರಾಧಾದೇವಿ

₹ 140.00




Year of Publication: 2019
Published by: ಶ್ರೀ ಲಕ್ಷ್ಮಿ ವೆಂಕಟೇಶ್ವರ ಪ್ರಕಾಶನ
Address: ಯಶವಂತಪುರ, ಬೆಂಗಳೂರು

Synopsys

ಹೆಚ್. ಜಿ. ರಾಧಾದೇವಿಯವ ಸಾಮಾಜಿಕ ಕಾದಂಬರಿ ಶ್ರಾವಣ ಸಿರಿಸಂಜೆ. ಬದುಕಿನ ಸಂಜೆ ಎಂದರೆ ವೃದ್ಧಾಪ್ಯ. ಈ ಇಳಿಕಾಲವನ್ನು ಶ್ರಾವಣದ ಸಂಜೆ ಮಾತ್ರವಲ್ಲ, ಸಿರಿಸಂಜೆಯಾಗಿಸಿದರೆ ಬದುಕು ಸುಖಮಯ, ಸಂತಸಮಯವಾಗಿದ್ದು ಆಹ್ಲಾದಕರವೂ ಆಗಿರುತ್ತದೆ ಎಂಬುದು ಈ ಕಾದಂಬರಿಯಲ್ಲಿ ರಾಧಾದೇವಿಯವರ ಇಂಗಿತ. ಇದನ್ನು ಸೌಮ್ಯ ಸರಳ ಸ್ವಭಾವದ ತೃಪ್ತ ಮನದ ಸುಮಿತ್ರೆಯ ಪಾತ್ರದ ಮೂಲಕ ತೋರಿಸಿದ್ದಾರೆ ಮತ್ತು ಓದುವವರಿಗೂ, ಇದ್ದರೆ ಸುಮಿತ್ರಳಂತಿರಬೇಕು ಎಂಬ ಆಸೆಯನ್ನೂ ಹುಟ್ಟು ಹಾಕುತ್ತಾರೆ. ಒಂದು ಸುಂದರ ಕೌಟುಂಬಿಕ ಚಿತ್ರಣದ ಈ ಕಾದಂಬರಿ ನೆನಪಿನಲ್ಲಿ ಉಳಿಯುವುದು ಮಾತ್ರವಲ್ಲ ಹೆಣ್ಣೊಬ್ಬಳ ಬದುಕಿನ ದಾರಿದೀಪವಾಗುತ್ತದೆ. ಉತ್ತಮ ನಡೆ ನುಡಿ ವಿಚಾರಗಳು ಎಂದಿಗೂ ಗೆಲ್ಲುತ್ತದೆ ಎಂಬ ಸತ್ವವನ್ನೂ ತತ್ವವನ್ನೂ ಸಾರುತ್ತದೆ. ಪ್ರಥಮ ಮುದ್ರಣ 1997, ಹಾಗೂ ದ್ವಿತೀಯ ಮುದ್ರಣ 2019.

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books