ದಂತದ ಗೊಂಬೆ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 130

₹ 77.00




Year of Publication: 2013
Published by: ಸುಧಾ ಎಂಟರ್‍ ಪ್ರೈಸಸ್
Address: #3036, 5ನೇ ಮುಖ್ಯರಸ್ತೆ, ಬಿ.ಎಸ್.ಕೆ 2ನೇ ಹಂತ, 14ನೇ ಕ್ರಾಸ್ ರೋಡ್, ತ್ಯಾಗರಾಜ್ ನಗರ, ಬೆಂಗಳೂರು-560108
Phone: 98454 49811

Synopsys

'ಪರಿಶ್ರಮ ಮೆಟ್ಟಲಿನಂತೆ.ಅದ್ರಷ್ಟ ಲಿಫ್ಟ್ ನಂತೆ. ಅದ್ರಷ್ಟ ಕೈ ಕೊಡಬಹುದು. ಆದರೆ  ಪರಿಶ್ರಮ ( ಮೆಟ್ಟಲು) ನಿಮ್ಮನ್ನ ಶಿಖರಕ್ಕೆ ಕೊಂಡೊಯ್ಯಬಲ್ಲದು" ಎಂಬ ರಾಷ್ಟ್ರಪತಿ ಅಬ್ದುಲ್ ಕಲಾಂರ ಮಾತುಗಳನ್ನು ಹಿನ್ನುಡಿಯಲ್ಲಿ ಹೊತ್ತ ಈ ದಂತದ ಗೊಂಬೆ ಜೀವನದ ಕೆಲವು ಕಟು ಸತ್ಯವನ್ನು ಈ ಕಾದಂಬರಿಯೂ ನಮ್ಮೆದುರು ತೆರೆದಿಡುತ್ತದೆ.ಹಾತೊರೆಯುವ ಮಗುವಿಗೆ ಮೂಲಭೂತ ಹಕ್ಕಾದ ಶಿಕ್ಷಣವೇ ದೊರೆಯದಿದ್ದರೆ ಆ ಮಗುವಿನ  ಪರಿಸ್ಥಿತಿ ಹೇಗಾದೀತು.ಇಂತಹ ಮನಸ್ಥಿತಿಯ ಮಗು ಚಾಮಿ ಯಾನೆ ಶಮಂತ್ ನ ಜೀವನ ಕಥೆಯೇ ದಂತದ ಗೊಂಬೆ.ತಂದೆ ತಾಯಿಯನ್ನು ಕಳೆದುಕೊಂಡು ಚಿಕ್ಕಪ ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದ ಮಗು ಈ ಚಾಮಿ.ಬೇಜವಾಬ್ದಾರಿಯ ಭಾವ ನಾಗರಾಜ,ಸ್ವಂತಿಕೆಯನ್ನು ಕಳಕೊಂಡು ಮೂಕೆತ್ತಿನಂತಾದ ಅಕ್ಕ ಪಂಚಮಿ,ಹಸಿವೆಯಿಂದ ಕಂಗೆಟ್ಟ ಅಷ್ಟಾವಕ್ರ,ಅನಿಷ್ಟ ರೆಂಬ ಮಕ್ಕಳು.ಇವರ ನಡುವೆ ಒಲ್ಲದ ಚಾಮಿ ಅತಿಥಿ ಯಾದ ಬಗೆ ಈ ಕಾದಂಬರಿಯಲ್ಲಿ ಮೂಡಿಬಂದಿವೆ.ಸಿಂಧುಳ ತರಹ ತಾನೂ ಕಾರಲ್ಲಿ ಸುತ್ತುವ ಕನಸು ಚಾಮಿದ್ದು.ತಂಗಿ ತುಳಸಿಯ ಕನವರಿಕೆ,ಓದಿನ ಹಂಬಲ ದೊಡ್ಡ ಮನುಷ್ಯನಾಗುವ ಉನ್ನತ ಗುರಿ ಹೊತ್ತ ಶಮಂತನ ಜೀವನದಲ್ಲಿ ಕಾಳ,ಗುಪ್ತಾಜಿಯವರ ಪಾತ್ರವೇನು?ಚಾಮಿ ತನ್ನ ಗುರಿ ತಲುಪಿದನಾ?ದಂತದ ಗೊಂಬೆಯ ಜೊತೆ ಕಾರಲ್ಲಿ ಸುತ್ತುವ ಕನಸೇನಾಯಿತು? ಚಾಮಿಯ ಬದುಕೇನಾಯಿತು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವು ಈ  ಕಾದಂಬರಿಯಲ್ಲಿ ಅಡಕವಾಗಿದೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books