ತುದಿಯಿರದ ಹಾದಿ

Author : ಮೋದೂರು ತೇಜ

Pages 248

₹ 250.00




Year of Publication: 2020
Published by: ಸಿವಿಜಿ ಪಬ್ಲಿಕೇಷನ್ಸ್
Address: ನಂ.277, 5ನೇ ತಿರುವು, ವಿಧಾನಸೌಧ ಎಕ್ಸಿಟ್, ಲಗ್ಗೆರೆ, ಬೆಂಗಳೂರು- 560058

Synopsys

‘ತುದಿಯಿರದ ಹಾದಿ’ ಮೋದೂರು ತೇಜ ಅವರ ಕಾದಂಬರಿ. ಕೃತಿಗೆ ಮುನ್ನುಡಿ ಬರೆದ ಡಾ. ವೆಂಕಟಗಿರಿ ದಳವಾಯಿ  ‘ತುದಿ ಇರದ ದಾರಿ’ ಇದೊಂದು ರೂಪಕ. ನಮ್ಮ ಸೃಜನಶೀಲತೆಯ ಪ್ರಯಾಣವೆಲ್ಲವೂ ಇದೇ ರೀತಿಯಲ್ಲಿ ಸಾಗುತ್ತದೆ. ಮೋದೂರು ಅದನ್ನು ಅರ್ಥಪೂರ್ಣವಾಗಿ ಹೇಳಿದ್ದಾರೆ. ದಲಿತ ಸಾಹಿತ್ಯದಲ್ಲಿ ಒಂದು ಬದಿ ವೈಚಾರಿಕತೆ ಇದ್ದರೆ ಮತ್ತೊಂದು ಬದಿ ಅನುಭವದ ಜಗತ್ತಿದೆ. ಇವೆರೆಡೂ ನಮಗೆ ಸೀಳು ದಾರಿಗಳು. ಯಾಕೆಂದರೆ ಈ ವೈಚಾರಿಕತೆ ನಮಗೆ ಅನೇಕ ಅನುಮಾನಗಳನ್ನು ಹುಟ್ಟಿಸುತ್ತದೆ. ಅದು ಯಾವ ಮೂಲದ ವೈಚಾರಿಕತೆ, ಯಾವ ಕಾರಣಕ್ಕಾಗಿ ಬಳಸುತ್ತಿರುವ ವೈಚಾರಿಕತೆ, ಯಾರನ್ನು ಪ್ರತಿನಿಧಿಸುವ ವೈಚಾರಿಕತೆ ಇತ್ಯಾದಿ ಪ್ರಶ್ನೆಗಳು ಸಹಜವಾಗಿಯೆ ಮೂಡಿಬಂದಿವೆ. ಆದರೆ ಅನುಭವ ಕಥನಗಳು ಈ ರೀತಿಯ ಪ್ರಶ್ನೆಗಳನ್ನು ಎತ್ತುವುದಿಲ್ಲ. ಅದು ವೈಚಾರಿಕತೆಗಿಂತಲೂ ಭಿನ್ನ. ಅಂತಹ ಭಿನ್ನವಾದ ಅನುಭವದ ಕಥನವನ್ನು ಮೋದೂರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಕಾದಂಬರಿಯ ಆಶಯವೆ ವಾಸ್ತವಿಕ ಜಗತ್ತಿಗೆ ಮುಖಾಮುಖಿಯಾಗುವುದು. ಆದರೆ ಆ ಮುಖಾಮುಖಿ ಸಂಘರ್ಷದ ಸ್ವರೂಪದಲ್ಲಿಯೇ ಇರಬೇಕಾಗಿಲ್ಲ. ಇದ್ದರೂ ಆ ಸ್ವರೂಪವನ್ನು ವಿವರಿಸುವ ಆಸಕ್ತಿ ಕಥನಕಾರರಿಗಿಲ್ಲ. ಚೆಲುವಮ್ಮನ ಕುಟುಂಬದ, ಪುಟ್ಟಮ್ಮನ ಕುಟುಂಬಗಳ ಜಗಳವು ಇದೇ ನೆಲೆಯದು. ಹಾಲಾಪುರದಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ಇದನ್ನೇ ಹೇಳುತ್ತದೆ. ಈಗಾಗಿ ಮೋದೂರು ತೇಜ ದಲಿತ ಸಂವೇದನೆಗೆ ಹೊಸ ಆಯಾಮವನ್ನು ಕೊಟ್ಟಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

About the Author

ಮೋದೂರು ತೇಜ

ಲೇಖಕ ಮೋದೂರು ತೇಜ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಕರ್ನಾಟಕ -ಆಂಧ್ರ ಗಡಿಭಾಗದ ಮೋದೂರು ಗ್ರಾಮದವರು. ಪ್ರಾಥಮಿಕ -ಪ್ರೌಢ ಶಿಕ್ಷಣವನ್ನು ಮೋದೂರು, ಜಾಜೂರು, ಚಳ್ಳಕೆರೆ, ಹಾಗೂ ಚಿಕ್ಕಮಗಳೂರಿನಲ್ಲಿ ಪೂರ್ಣಗೊಳಿಸಿದ್ದು, ಮೈಸೂರಿನ ಮುಕ್ತ ವಿ.ವಿ.ಯಿಂದ ಎಂ.ಎ ಪದವಿ ಪಡೆದರು.  ಕೃತಿಗಳು:  ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯದೊಂದಿಗೆ ಪ್ರಕಟಿತ ಕವನ ಸಂಕಲನ-‘ಮರದೊಳಗಣ ಕಿಚ್ಚು (2007). ಬುದ್ಧನ ಮೇಲೂ ಯುದ್ಧ’(2010), ಭೂಮಿ ತೂಕದ ಪ್ರೀತಿ(2011), ಅರ್ಧಕ್ಕೆ ನಿಂತ ಚಿತ್ರ (2013), ಹುಲಿವೇಷ ಇವು ಕಥಾ ಸಂಕಲನಗಳು, ವೇದಾವತಿ ತೀರದಲ್ಲಿ (2011) ಹಾಗೂ ತುದಿ ಇರದ ಹಾದಿ-ಇವು ಕಾದಂಬರಿಗಳು, ನಾಡಿನ ವಿವಿಧ ಪತ್ರಿಕೆಗಳು ಆಯೋಜಿಸಿದ್ದ ಕಥಾ ಸ್ಪರ್ಧೆಯಲ್ಲಿ  ...

READ MORE

Related Books