ಎಲ್ಲಾ ಅವನ ಹೆಸರಿನಲ್ಲೇ!

Author : ತ.ರಾ.ಸು. (ತ.ರಾ. ಸುಬ್ಬರಾವ್)

Pages 200

₹ 140.00




Year of Publication: 2018
Published by: ಹೇಮಂತ ಸಾಹಿತ್ಯ
Address: #53/1, ಕಾಟನ್ ಪೇಟೆ ಮುಖ್ಯರಸ್ತೆ ಬೆಂಗಳೂರು-560053
Phone: 08026702010

Synopsys

ನಮ್ಮ ದೇಶ-ಸಂಸ್ಕೃತಿ ಎಲ್ಲವೂ ಧರ್ಮ ನಿಷ್ಠ. ಆಧುನಿಕ ಯುಗದಲ್ಲೂ ಈ ನಂಬಿಕೆ ಅಚಲವಾಗಿರುವುದನ್ನು ಕಾಣುತ್ತೇವೆ. ಆದರೆ, ಈ ಮಾತು ಇದೇ ದೇಶಕ್ಕೆ ಅನ್ವಯಿಸುತ್ತಿಲ್ಲ. ವ್ಯಕ್ತಿಗತವಾಗಿ ದೇವರ-ಧರ್ಮ ಕುರಿತು ನಂಬಿಕೆ ಇದೆ ಎಂದರೂ ವ್ಯಾವಹಾರಿಕವಾಗಿ ವರ್ತಿಸುವಾಗ ಎಲ್ಲವನ್ನೂ ಮರೆತು ಬಿಡುತ್ತೇವೆ ಎಂಬ ಕೊರಗು ಲೇಖಕ ತ.ರಾ.ಸು ಅವರದ್ದಾಗಿದೆ. ಸ್ವಾರ್ಥ-ನಿಸ್ವಾರ್ಥದ ಕಾರ್ಯ ಏನೇ ಇರಲಿ ಎಲ್ಲವೂ ದೇವರ ಹೆಸರಿನಲ್ಲೇ ನೆರವೇರಿಸುತ್ತೇವೆ. ಹೀಗಾಗಿ, ನಮ್ಮ ಆಚಾರ-ವಿಚಾರಗಳಲ್ಲಿ ಸಾಕಷ್ಟು ದ್ವಂದ್ವ ಇದೆ. ಈ ವಿಚಾರ-ಭಾವದ ಕಥಾ ವಸ್ತುವನ್ನೇ ಲೇಖಕರು ’ಎಲ್ಲಾ ಅವನ ಹೆಸರಿನಲ್ಲೇ!’ ಎಂಬ ಶೀರ್ಷಿಕೆಯೊಂದಿಗೆ ಕಾದಂಬರಿ ರಚಿಸಿದ್ದಾರೆ.

About the Author

ತ.ರಾ.ಸು. (ತ.ರಾ. ಸುಬ್ಬರಾವ್)
(12 June 1906 - 10 April 1984)

ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...

READ MORE

Related Books