ಕಾಲಯಾನ

Author : ಭಾರತೀಸುತ (ಶಾನಭಾಗ ರಾಮಯ್ಯ ನಾರಾಯಣರಾವ್)

Pages 137

₹ 1.00




Year of Publication: 1947
Published by: ಪ್ರತಿಭಾ ಗ್ರಂಥಮಾಲೆ
Address: ಧಾರವಾಡ

Synopsys

ಭಾರತೀಸುತ ಅವರು ಬರೆದ ಕಾದಂಬರಿ-ಕಾಲಯಾನ. ಭವಿಷ್ಯದ ಬಸಿರನ್ನು ಹೊಕ್ಕು 10ಶತಮಾನಗಳಷ್ಟು ಮುಂದೆ ಹೋಗಿ ಮಾನವ ಸಮಾಜದ ಇರುವನ್ನು ಚಿತ್ರಿಸಲು ಯತ್ನಿಸಿದ್ದೇ ಈ ಕಾದಂಬರಿ ಎಂದು ಲೇಖಕರು ತಿಳಿಸಿದ್ದಾರೆ. ಭೂಗೋಲವೇ ಈ ಕಲ್ಪನಾ ಚಿತ್ರದ ಲೋಕ. ಕಾಲಯಾನವನ್ನು ಕುರಿತ ಸಾಹಿತ್ಯಕ್ಕೆ ಉಟೋಪಿಯಾ ಎಂದು ಕರೆಯುತ್ತಾರೆ. ಇವುಗಳ ಮುಖ್ಯ ಗುಣಗಳೆಂದರೆ-ಸುಸ್ಪಷ್ಟತೆ ಹಾಗೂ ಸಂಭವನೀಯತೆ. ಈ ಎರಡೂ ಗುಣಗಳು ಭಾರತೀಸುತರ ಕಾಲಯಾನದಲ್ಲಿವೆ ಎಂದು ಕೃತಿಗೆ ಮುನ್ನುಡಿ ಬರೆದ ಬಿ. ಶಂಕರ ಭಟ್ಟರು ಪ್ರಶಂಸಿಸಿದ್ದಾರೆ.

About the Author

ಭಾರತೀಸುತ (ಶಾನಭಾಗ ರಾಮಯ್ಯ ನಾರಾಯಣರಾವ್)
(15 May 1915 - 04 April 1976)

ಕೊಡಗು ಜಿಲ್ಲೆಯ ಬಿಳಿಗೇರಿಯಲ್ಲಿ ಜನಿಸಿದ ಶಾನಭಾಗ ರಾಮಯ್ಯ ನಾರಾಯಣರಾವ್ ಅವರು 'ಭಾರತೀಸುತ' ಎಂಬ ಹೆಸರಿನಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆ ವಾಸ ಅನುಭವಿಸಿದ್ದ ಅವರು ಬಿಡುಗಡೆಯ ನಂತರ ಕಾದಂಬರಿ- ಸಾಹಿತ್ಯ ರಚನೆ ಆರಂಭಿಸಿದರು. ಪತ್ರಿಕೋದ್ಯಮದಲ್ಲಿ ಆಸಕ್ತರಾಗಿದ್ದ ಅವರು ಕೆಲಕಾಲ 'ರಾಷ್ಟಬಂಧು' ಮತ್ತು 'ಗುರುವಾಣಿ' ಎಂಬ ಪತ್ರಿಕೆ ನಡೆಸಿದರು. ನಂತರ ಶಿಕ್ಷಕ ವೃತ್ತಿ ಆರಂಭಿಸಿದ ಅವರು ಕಥೆ-ಕಾದಂಬರಿಗಳ ರಚನೆಯಲ್ಲಿ ತೊಡಗಿಸಿಕೊಂಡರು. ಅವರು ರಚಿಸಿದ ’ಎಡಕಲ್ಲು ಗುಡ್ಡದ ಮೇಲೆ’, ’ಹುಲಿಯ ಹಾಲಿನ ಮೇವು’, ’ಗಿರಿಕನ್ನಿಕೆ’, ’ಬಯಲುದಾರಿ’ ಕಾದಂಬರಿಗಳು ಚಲಚಿತ್ರಗಳಾಗಿ ಯಶಸ್ವಿಯಾದವು.  ಸಂತಾನಭಿಕ್ಷೆ ಇಳಿದು ಬಾ ತಾಯಿ, ಬೆಂಕಿಯ ಮಳೆ, ವಕ್ರ ರೇಖೆ, ಸಾಧನ ಕುಟೀರ, ಹುಲಿಬೋನು, ಗಿಳಿಯು ಪಂಜರದೊಳಿಲ್ಲ, ...

READ MORE

Related Books