ಮರಳು ಸೇತುವೆ

Author : ತ.ರಾ.ಸು. (ತ.ರಾ. ಸುಬ್ಬರಾವ್)

Pages 132

₹ 90.00




Year of Publication: 2016
Published by: ಸಾಹಿತ್ಯ ನಂದನ
Address: #9, 4ನೇ ಇ-ಬ್ಲಾಕ್, ಮುಖ್ಯ ರಸ್ತೆ, ರಾಜಾಜಿನಗರ, ಬೆಂಗಳೂರು-560010

Synopsys

ತರಾಸು ಅವರ ’ಮರಳು ಸೇತುವೆ ’ಕಾದಂಬರಿಯು ಮೊದಲು 1970ರಲ್ಲಿ ಮುದ್ರಣ ಕಂಡಿತ್ತು. ಈಗಿನದು 4ನೇ ಮುದ್ರಣ. ಧರ್ಮವು ಪರೋಪಕಾರದ ಆಚಾರವಾಗದೇ ಶೋಷಣೆಯ ವಿಚಾರವಾಗುತ್ತಿರುವುದು ಲೇಖಕ ತರಾಸು ಅವರನ್ನು ಕಾಡಿದ್ದು, ಕಾದಂಬರಿಯಲ್ಲಿ ವಿಷಯ ವಸ್ತುವೇ ಆಗಿದೆ.

ಪರಹಿಂಸೆಗೆ ಪ್ರಚೋದನೆಯಾಗುವ ಇಂತಹ ಆಚರಣೆಗಳಿಂದ ದೇವ-ಮಂದಿರಗಳಿಗೂ ನಷ್ಟವಾಗುತ್ತದೆ. ಇಂತಹ ಸಂಗತಿಗಳು ಮನುಷ್ಯನನ್ನು ಹಾಗೂ ಮಾನವೀಯತೆಯನ್ನು ದುರ್ಬಲಗೊಳಿಸುತ್ತವೆ ಎಂಬುದು ಕಾದಂಬರಿ ನೀಡುವ ಎಚ್ಚರವೂ ಆಗಿದೆ.

About the Author

ತ.ರಾ.ಸು. (ತ.ರಾ. ಸುಬ್ಬರಾವ್)
(12 June 1906 - 10 April 1984)

ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...

READ MORE

Related Books