ಮಿಯಾ ಮಲರ್

Author : ಅ.ನ.ಕೃ (ಅ.ನ. ಕೃಷ್ಣರಾಯ)

Pages 143

₹ 115.00




Year of Publication: 2003
Published by: ಸಾಗರ್ ಪ್ರಕಾಶನ, ಬೆಂಗಳೂರು.

Synopsys

ಕಾದಂಬರಿ ಸಾರ್ವಭೌಮ ಅನಕೃ ಕನ್ನಡಿಗರೆಂದೂ ಮರೆಯಲಾಗದ, ಮರೆಯಬಾರದ ಅನನ್ಯ ಚೇತನ! ಬಹುಮುಖ ಪ್ರತಿಭೆಯ ಪ್ರಯೋಗಶೀಲ, ಪ್ರಗತಿ ಶೀಲ ಚಳವಳಿಯ ಪಾರ್ಥ, ಸಾಹಿತ್ಯ ಯೋಗಿ, ದೈತ್ಯ ಓದುಗ ಹಾಗೂ ಬರಹಗಾರ ಅನಕೃ ಅವರಂತಹ ಕನ್ನಡ ಕುಲಪುತ್ರ ಕನ್ನಡಕ್ಕೊಬ್ಬರೇ! ನಾಟಕದಿಂದಲೇ ಅವರ ಸಾಹಿತ್ಯ ಕೃಷಿ ಆರಂಭವಾದರೂ, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ತೊಡಗಿಸಿಕೊಂಡರೂ ಕಾದಂಬರಿಯತ್ತಲೇ ಹೆಚ್ಚು ವಾಲಿದವರು ಅನಕೃ. ಅನಕೃ ಅವರಿಗೆ ಕಲಾವಿದರೆಂದರೆ ತೀರಾ ಗೌರವ. ಅವರ ಮೊದಲ ಕಾದಂಬರಿ ಕಲಾವಿದನನ್ನು ಕುರಿತದ್ದೇ! ಉದಯರಾಗ, ಸಂಧ್ಯಾ ರಾಗ, ದೀಪಾರಾಧನೆ, ಸಂಗ್ರಾಮ, ಬಣ್ಣದ ಬದುಕು, ಕನ್ನಡಮ್ಮನ ಗುಡಿಯಲ್ಲಿ, ಮಿಯಾಮಲಾರ, ಕಲಾವಿದ, ಏಣಾಕ್ಷಿ ಹೀಗೆ ಕಲೆಗೇ ಜೀವ ಸವೆಯಿಸಿದವರ ಬದುಕಿನ ಏರುಪೇರುಗಳ ಬಗ್ಗೆ ಕಲಾತ್ಮಕವಾಗಿ ಬರೆದೇ ಬರೆದರು. ಜನಪ್ರಗತಿ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದ "ಮಿಯಾ ಮಲ್ಹಾರ " (ಮಲಾರ) ಕಾದಂಬರಿ ಕೂಡ ಒಬ್ಬ ಸಂಗೀತೋಪಾಸಕನ ಆಸ್ಥೆ, ಶ್ರದ್ಧೆ, ಸಾಧನೆ, ಜೀವ ಹಿಂಡುವ ಚಟಗಳು, ವಿನಯವಂತಿಕೆ, ಸೊಕ್ಕು, ಸ್ವಾರ್ಥ, ಭ್ರಮನಿರಸನ ಹೀಗೆ ಬದುಕಿನ ಎಲ್ಲಾ ಅನುಭವಗಳನ್ನು ಸಾದ್ಯಂತವಾಗಿ ಚಿತ್ರಿಸುವ ಕಥಾ ಹಂದರವುಳ್ಳದ್ದು! ವಿದುರ ಜಟಕಾವಾಲಾ ಮಜೀದ್ ಖಾನನ ಏಕೈಕ ಪುತ್ರ ಪೀರ್ ಜಾದಾನಿಗೆ ತಂದೆಯ ಜಟಕಾ ವಾಲಾ ಕಸುಬನ್ನು ಮುಂದುವರೆಸುವುದಕ್ಕಿಂತ ಸಂಗೀತಗಾರನಾಗುವ ಹಂಬಲ! ಇದರ ಸುತ್ತಲೂ ಹೆಣೆದಿರುವ ಕಥೆ ಇದಾಗಿದೆ. ಉರ್ದು ಮಿಶ್ರಿತ ಕನ್ನಡ ಭಾಷೆ ಕಾದಂಬರಿಯ ಸತ್ವವನ್ನು ಹೆಚ್ಚಿಸುತ್ತದೆ. ಅನಕೃ ಅವರ ಅಗಾಧ ಸಂಗೀತ ಜ್ಞಾನ ಮೂಗಿನ ಮೇಲೆ ಬೆರಳಿಡಿಸುತ್ತದೆ!

About the Author

ಅ.ನ.ಕೃ (ಅ.ನ. ಕೃಷ್ಣರಾಯ)
(09 May 1908 - 04 July 1971)

‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...

READ MORE

Related Books