ಬಿರಿದ ಮೊಗ್ಗು

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 256

₹ 190.00




Year of Publication: 2019
Published by: ಸುಧಾ ಎಂಟರ್ ಪ್ರೈಸಸ್,
Address: #761, 8ನೇ ಮುಖ್ಯ ರಸ್ತೆ, 3ನೇ ಬ್ಲಾಕ್, ಕೋರಮಂಗಲ , ಬೆಂಗಳೂರು-560034

Synopsys

‘ಬಿರಿದ ಮೊಗ್ಗು ಮತ್ತು ಇತರ ಕಿರು ಕಾದಂಬರಿಗಳು' ಕೃತಿಯು ಸಾಯಿಸುತೆ ಅವರ ಕಿರು ಕಾದಂಬರಿಗಳಾಗಿವೆ. ಬಿರಿದ ಮೊಗ್ಗು ಶೀರ್ಷಿಕೆಯ ಈ ಕಾದಂಬರಿಯಲ್ಲಿ ‘ಪಲ್ಲವಿ’, ‘ಧರೆಗಿಳಿದ ಹಕ್ಕಿ’ ಮತ್ತು ‘ಸ್ವರ್ಣ ಪಂಜರ’ ಕಿರು ಕಾದಂಬರಿಗಳಿವೆ. ‘ರಾಗಸಂಗಮ’ ಹಾಗೂ ‘ಹಂಸರಾಗ’ ತಿಂಗಳ ಪತ್ರಿಕೆಯಲ್ಲಿ ಪ್ರಕಟಗೊಂಡ ಕಾದಂಬರಿಗಳು ಒಟ್ಟಾಗಿ ‘ಬಿರಿದ ಮೊಗ್ಗು’ ಕೃತಿಯ ಮೂಲಕ ಪ್ರಕಟಗೊಂಡಿದೆ. ಈ ಕೃತಿಯ ಬೆನ್ನುಡಿಯಲ್ಲಿ, ಮನಸ್ಸಿನ ಹಿಡಿತದಲ್ಲಿರುವ ಬದುಕಿನ ಬಗ್ಗೆ ಸ್ವಲ್ಪ ತೀವ್ರವಾಗಿ ವಿಶ್ಲೇಷಣೆಗೆ ತೊಡಗಿದರೆ ದಿಗ್ಬ್ರಾಂತಿಯಾಗುತ್ತೆ. ಜೀವನವೆನ್ನುವುದು ಎಷ್ಟು ಅರ್ಥಪೂರ್ಣ ಅಷ್ಟೇ ವಿಚಿತ್ರವೆನಿಸುತ್ತೆ. ಕೆಲವೊಮ್ಮೆ ವಿಲಕ್ಷಣವು ಕೂಡ. ಬಾಲ್ಯದ ಮುಗ್ಧತೆ ಕಳೆದುಕೊಳ್ಳುವುದಕ್ಕೆ ಮುನ್ನವೆ ವಿಪ್ಲವ ಶುರುವಾಗುತ್ತೆ ನಂತರವೆ ನಿಜವಾದ ಹೋರಾಟ. ಕೆರಿಯರ್, ಲೈಫ್ ನಲ್ಲಿ ಸೆಟ್ಲಾಗಬೇಕೆಂಬ ತುಡಿತ ಪ್ರತಿ ಕ್ಷಣ ಕಾಡುವ ಪ್ರೇಮ, ಕಾಮ, ಆತಂಕದ ಕ್ಷಣಗಳು. ಮಕ್ಕಳಾದ ಕೂಡಲೆ ಹೆಚ್ಚು ಕಡಿಮೆ ಫಸ್ಟ್ ಇನ್ನಿಂಗ್ಸ್ ಮುಗಿಯುತ್ತೆ. ನಂತರದ್ದು ಮೊದಲಿಗಿಂತ ಭಿನ್ನ. ಮಕ್ಕಳ ಅವಿಧೇಯತೆ, ಆರೋಗ್ಯದಲ್ಲಿ ಏರುಪೇರು. ಆಗ ಲೆಕ್ಕಾಚಾರ ಶುರುವಾಗುತ್ತೆ. ಇವೆಲ್ಲದರಿಂದ ಮುಕ್ತವಾಗುವುದು ಹೇಗೆ? ಇಂತ ಅನನ್ಯವಾದ, ಗೋಜಲು ಗೋಜಲಾದ ಮಾನವನ ಬದುಕಿನ ಬಗ್ಗೆ ತಮ್ಮ ವಿಚಾರಧಾರೆಗಳನ್ನು ಮಂಡಿಸಿದ್ದಾರೆ ದಾರ್ಶನಿಕರು' ಎಂದು ಪ್ರಸ್ತಾಪಿಸಿದ್ದಾರೆ.

 

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books