ಆಹುತಿ

Author : ‌ಅನುಷ್ ಎ. ಶೆಟ್ಟಿ

Pages 150

₹ 100.00




Year of Publication: 2014
Published by: ಅನುಗ್ರಹ ಪ್ರಕಾಶನ
Address: ನಂ. 690, 80 ಅಡಿ ರಸ್ತೆ, ಕನಕದಾಸ ನಗರ,ತ್ರಿವೇಣಿ ಸೂಪರ್‍ ಮಾರ್ಕೆಟ್ ಹತ್ತಿರ, ದತ್ತಗಳ್ಳಿ 3ನೇ ಹಂತ ಮೈಸೂರು – 570022
Phone: 9980808031

Synopsys

ಲೇಖಕರಾದ ಅನುಷ್ ಎ ಶೆಟ್ಟಿಯವರ ಮೊದಲ ಕಾದಂಬರಿ ’ಆಹುತಿ’. ಇದು ನೈಜ ಕತೆಯ ಆಧಾರಿತ ಕಾದಂಬರಿ. ಇದನ್ನು ಬಿಡುಗಡೆಗೊಳಿಸಿದವರು ಗ್ರೀನ್ ಆಸ್ಕರ್ ಪುರಸ್ಕೃತರಾದ  ಕೃಪಾಕರ ಸೇನಾನಿ. ನಾಗರಹೊಳೆಯಲ್ಲಿ ನಡೆದ ಕಾಡುಗಳ್ಳತನದ ಬೆನ್ನೇರಿ ಹೊರಡುವ ಪತ್ರಕರ್ತನೊಬ್ಬನ ರೋಮಾಂಚಕಾರಿ ಪಯಣವನ್ನು ಇದರಲ್ಲಿ ಕಾಣಬಹುದು.

ಲೇಖಕರು ಕೇಳಿದ ಸತ್ಯ ಘಟನೆಯನ್ನು ಈ ಕಾದಂಬರಿಯ ಮೂಲಕ ಓದುಗರ ಮುಂದಿಟ್ಟಿದ್ದಾರೆ. ಪರಿಸರ ನಾಶದ ಕುರಿತು ,ಯುವಕರ ಹುಂಬತನದ ಕುರಿತು,ಕಾಡುಗಳ್ಳರ ಕುರಿತು,ಭ್ರಷ್ಟಾಚಾರದ ವಿವಿಧ ಮುಖಗಳ ಕುರಿತು ಸಾಗುವ ಈ ಕಾದಂಬರಿ ಕುತೂಹಲದ ಜೊತೆಗೆ ರೋಮಾಂಚನಗೊಳ್ಳುವ ಸಂಗತಿಗಳನ್ನು ತೆರೆದಿಡುತ್ತದೆ

About the Author

‌ಅನುಷ್ ಎ. ಶೆಟ್ಟಿ

ಅನುಷ್ ಎ ಶೆಟ್ಟಿ ಜನಿಸಿದ್ದು ಮಂಗಳೂರಿನಲ್ಲಿ. ವಿದ್ಯಾಭ್ಯಾಸ ಹುಣಸೂರು, ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ವಿದ್ಯುನ್ಮಾನ ಮಾಧ್ಯಮದಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಇವರು ಕನ್ನಡಪ್ರಭ, ಸಾಧ್ವಿ ದಿನಪತ್ರಿಕೆಗಳಲ್ಲಿ, ಜೀ ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. 15 ವರ್ಷಗಳ ಕಾಲ ಮೃದಂಗ ವಾದನ ಕಲಿತ ಇವರು, ಅನೇಕ ಲಯವಾದ್ಯಗಳನ್ನು ನುಡಿಸಬಲ್ಲವರಾಗಿದ್ದು, ತಮ್ಮ ಗೆಳೆಯರೊಂದಿಗೆ ಕೂಡಿ ಆರಂಭಿಸಿರುವ ‘ನಾವು’ ಬ್ಯಾಂಡ್ ಮೂಲಕ ಸಂಗೀತದಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಕಳೆದ 8 ವರ್ಷಗಳಿಂದ ರಂಗ ಸಂಗೀತವನ್ನೂ ಮಾಡುತ್ತ ದೇಶಾದ್ಯಂತ ಓಡಾಡುತ್ತಿದ್ದಾರೆ. ಪ್ರಸ್ತುತ, ಗೆಳೆಯ ಶ್ರೀವತ್ಸ ಅವರೊಂದಿಗೆ ‘ಇವೆಂಟೊ’ ಎಂಬ ಇವೆಂಟ್ ಕಂಪೆನಿ ಮತ್ತು ಅನುಗ್ರಹ ...

READ MORE

Related Books