ತಂತು

Author : ಎಸ್.ಎಲ್. ಭೈರಪ್ಪ

Pages 888

₹ 825.00

Buy Now


Year of Publication: 1993
Published by: ಸಾಹಿತ್ಯ ಭಂಡಾರ
Address: ಶಾಪ್ ನಂ.8, ಜೆಎಂ ಲೇನ್, ಬಳೆಪೇಟೆ, ಬೆಂಗಳೂರು ಕರ್ನಾಟಕ 560053
Phone: 080 2287 7618

Synopsys

ಪ್ರಸಿದ್ದ ಸಾಹಿತಿ ಎಸ್.ಎಲ್. ಭೈರಪ್ಪನವರ ’ತಂತು’ ಕಾದಂಬರಿಯು ಮುಖ್ಯವಾಗಿ ಮೂರು ವಸ್ತುಗಳು ಚರ್ಚೆ ಮಾಡುತ್ತದೆ. ಶಿಕ್ಷಣ, ಭ್ರಷ್ಟಾಚಾರ ಮತ್ತು ಲೈಂಗಿಕ ಸಂಬಂಧಗಳು.

ಕಾದಂಬರಿ ಪ್ರಾರಂಭವಾಗುವುದು ಬಸನಪುರ ಎಂಬ ಹಳ್ಳಿಯ ಚೆನ್ನಕೇಶವ ದೇವಸ್ಥಾನದ ಸರಸ್ವತಿಯ ಪ್ರತಿಮೆ ಕಳುವಾದ ವರದಿಯನ್ನು ಪ್ರಕಟಿಸಲು ಟ್ರಿಬ್ಯೂನ್ ಪತ್ರಿಕೆಯ ಬೆಂಗಳೂರಿನ ರೆಸಿಡೆಂಟ್ ಎಡಿಟರ್ ರವೀಂದ್ರ ತನ್ನ ವರದಿಗಾರನಿಗೆ ಸೂಚನೆ ಕೊಡುವ ದೃಶ್ಯದಿಂದ. ಘಟನೆಯಿಂದ ರವೀಂದ್ರ ದುಃಖಿತನಾಗುತ್ತಾನೆ. ದೇವಸ್ಥಾನ ತನ್ನ ಹುಟ್ಟೂರಿನದೇ ಆಗಿದ್ದು ರವೀಂದ್ರ ಅಲ್ಲಿಗೆ ಹೋಗಿ ದೇವಸ್ಥಾನಕ್ಕಾಗಿ ತಾನೇನು ಮಾಡ ಬಹುದೆಂಬುದನ್ನು ಯೋಚಿಸಬೇಕೆಂದುಕೊಂಡು ಅನಂತರ ಅಲ್ಲಿಗೆ ತಲುಪುತ್ತಾನೆ. ಅವನಿಗೆ ಅಲ್ಲಿ ಕಂಡುಬರುವ ಸಂಸ್ಕೃತಿಯ ಬದಲಾವಣೆ ಅವನ ನಿಲುವುಗಳ ಪುನರ್ವಿಮರ್ಶೆಗೆ ಕಾರಣವಾಗುತ್ತದೆ.

ಬಿಡಿಬಿಡಿಯಾಗಿಟ್ಟುಕೊಂಡರೆ ರಾಜಕೀಯ ಮತ್ತು ಸಂಗೀತಗಳೂ ಸೇರಿ ಸಿತಾರಿನ ಐದು ತಂತಿಗಳು ಸಿದ್ಧವಾಗುತ್ತದೆ. ಒಂದು ದಶಕದ ಅವಧಿಯಲ್ಲಿ ಕ್ಷೇತ್ರಗಳಲ್ಲಾದ ಬದಲಾವಣೆಗಳು ಇಲ್ಲಿ ಸುಂದರವಾಗಿ ಚಿತ್ರಿತವಾಗಿವೆ. ಸಿಂಹಾವಲೋಕನಕ್ರಮದಿಂದ ಭಾರತದ ಜೀವನದ ಮೇಲೆ ಮಹಾತ್ಮ ಗಾಂಧಿ ಮತ್ತು ವಿವೇಕಾನಂದರ ಪ್ರಭಾವದ ಒಂದು ನೋಟವೂ ಇಲ್ಲಿ ಕಂಡು ಬರುತ್ತದೆ.

About the Author

ಎಸ್.ಎಲ್. ಭೈರಪ್ಪ
(20 August 1931)

ಜನಪ್ರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಮೀಮಾಂಸಕರೂ ಹೌದು. ಹಾಸನ ಜಿಲ್ಲೆ ಚೆನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ 1931ರ ಆಗಸ್ಟ್ 20ರಂದು ಜನಿಸಿದರು. ತಂದೆ ಲಿಂಗಣ್ಣಯ್ಯ- ತಾಯಿ ಗೌರಮ್ಮ. ತಮ್ಮ ಹುಟ್ಟೂರಿನ ಸುತ್ತಮುತ್ತಲ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮೈಸೂರಿಗೆ ಬಂದು ಶಾರದಾವಿಲಾಸ ಪ್ರೌಢಶಾಲೆಯಲ್ಲಿ ಓದಿ, ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮಾಡಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿದರು. ಅನಂತರ ಹುಬ್ಬಳ್ಳಿಯ ಕಾಡುಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕ (1958-60), ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ (1960-66), ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ ಉಪಪ್ರಾಧ್ಯಾಪಕ (1967-1971) ...

READ MORE

Related Books