ಬಾನಲ್ಲಿ ಬಂಗಾರ

Author : ಹೆಚ್.ಜಿ. ರಾಧಾದೇವಿ

Pages 180

₹ 24.00




Year of Publication: 1991
Published by: ಕೀರ್ತಿ ಪ್ರಕಾಶನ
Address: ನಂಬರ್ 2, ಎಸ್.ಡಿ.ಎಂ.ಲೇನ್, ಮನವಾರ್ತಿಪೇಟಿ, ಬೆಂಗಳೂರು- 53

Synopsys

‘ಬಾನಲ್ಲಿ ಬಂಗಾರ’ ಲೇಖಕಿ ಹೆಚ್. ಜಿ. ರಾಧಾದೇವಿ ಅವರ ಸಾಮಾಜಿಕ ಕಾದಂಬರಿ. ಇದು ಹಂಸರಾಗ ಮಾಸ ಪತ್ರಿಕೆಯಲ್ಲಿ ಹದಿನೈದು ಕಂತುಗಳಾಗಿ ಮೂಡಿ ಬಂದ ಕಾದಂಬರಿ. ಧಾರಾವಾಹಿಯಾಗಿ ಪ್ರಕಟವಾಗಿದ್ದ ಈ ಕೃತಿಗೆ ಹೆಚ್ಚು ಜನಮೆಚ್ಚುಗೆ ವ್ಯಕ್ತವಾಗಿತ್ತು. ವಿರಸ ದಾಂಪತ್ಯಗಳಲ್ಲಿ ಮೂಡಿ ಬಂದ ಕಹಿಯನ್ನು ಸ್ವಲ್ಪ ತಾಳ್ಮೆ, ಪ್ರೀತಿ, ಪ್ರೇಮದಿಂದ ಸಿಹಿಯಾಗಿ ಪರಿವರ್ತಿಸಿ, ಸರಸ ಸುಂದರ ಬದುಕನ್ನು ಸವಿಯುವುದು ಹೇಗೆಂದು ಈ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books