ಆಶಾಸೌರಭ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 128

₹ 70.00




Year of Publication: 2013
Published by: ಸುಧಾ ಎಂಟರ್‍ ಪ್ರೈಸಸ್
Address: #3036, 5ನೇ ಮುಖ್ಯರಸ್ತೆ, ಬಿ.ಎಸ್.ಕೆ 2ನೇ ಹಂತ, 14ನೇ ಕ್ರಾಸ್ ರೋಡ್, ತ್ಯಾಗರಾಜ್ ನಗರ, ಬೆಂಗಳೂರು-560078
Phone: 98454 49811

Synopsys

ಅಮೆರಿಕದಂಥ ದೇಶದಿಂದ ಎಷ್ಟೋ ದೊಡ್ಡ ಆಸೆಯೊತ್ತು ಇಲ್ಲಿಗೆ ಬಂದಿದ್ದ. ವಿದೇಶಿ ಹೆಣ್ಣಿನ ಹೊಟ್ಟೆಯಲ್ಲಿ ಹುಟ್ಟಿದ ಗೋಕುಲ್‍ಗೆ ಇಲ್ಲೇನು ಕೆಲಸ? ಈ ಪರಿಸರಕ್ಕೆ ಹೊಂದಿಕೊಳ್ಳುವುದು ಸಾಧ್ಯವೇ? ಸಾಧ್ಯವಾಗಿಸಬೇಕಿತ್ತು. ತಂದೆ ಹೃದಯದಲ್ಲಿ ಮೊಗ್ಗಾಗಿರಿಸಿದ್ದು ಇಲ್ಲಿ ಹೂವಾಗಬೇಕಿತ್ತು.  ಆದರೆ ಸುರುಟಿ ಕೆಳಗೆ ಉದುರುವ ಹಾದಿಯತ್ತ ನಡೆದಿತ್ತು. ಕಾರಣ ಭಾರತೀಯರಲ್ಲಿ ಕಟ್ಟುಪಾಡುಗಳು ಹೆಚ್ಚು. ಶಾಸ್ತ್ರ, ಸಂಪ್ರದಾಯಗಳು, ನೀತಿ, ನಿಯಮಗಳು ಜೀವನ್ದ ಮೂಲ ಚೇತನವಾದ ಪ್ರೀತಿಯನ್ನು ಸುರುಟಿಸುತ್ತಿ ಗೋಕುಲ್ ನಿರಾಸೆಯಿಂದ ಹಿಂದಿರುಗಬೇಕಾ? ಎಂದುಕೊಂಡಾಗ ಬೇಡವೆಂದಿದ್ದು ಅನುಪಮ: “ಭಾರತಕ್ಕೆ ಬಂದ ಗೋಕುಲ್ ನಿರಾಸೆಯಿಂದ ಹಿಂದಿರುಗೋದು ಬೇಡ. ಇದನ್ನು ಭಾರತದ ಉಜ್ವಲ ಸಂಸ್ಕೃತಿ ಒಪ್ಪುವುದಿಲ್ಲ”. ಇದು ಎಲ್ಲರಿಗೂ ಒಪ್ಪಿಗೆಯಾಗುವ ವಿಷಯವೆ.ಎಂಬೂದು ಕಾದಂಬರಿಕಾರ್ತಿಯ ಅಂಬೋಣ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books