ಅರುಣ ಕಿರಣ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 184

₹ 140.00




Year of Publication: 2010
Published by: ದಿವ್ಯಚಂದ್ರ ಪ್ರಕಾಶನ
Address: ಸಂ.45, ಪಾಪಣ್ಣನ ತೋಟ, ಒಂದನೆ ಮುಖ್ಯರಸ್ತೆ, 2ನೆಯ ಅಡ್ಡರಸ್ತೆ, ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿ, 2ನೆಯ ಹಂತ, ಬಸವೇಶ್ವರನಗರ, ಬೆಂಗಳೂರು-560079
Phone: 080-23404627/9448259595

Synopsys

ಮಾನವನ ಜೀವಿತಾವಧಿಯಲ್ಲಿ ಹಲವಾರು ಸಂಬಂಧಗಳು ಇರುತ್ತವೆ, ಕೆಲವು ಜನ್ಮದಾತವಾಗಿದ್ದರೆ,ಇನ್ನೂ ಕೆಲವು ನಡುವೆ ಬಂದು ಸೇರಿಕೊಳ್ಳುತ್ತವೆ. ಪ್ರತಿಯೊಂದು ವ್ಯಕ್ತಿಗೆ ನಾವು ತೋರಿಸುವ ಪ್ರೀತಿಯ ವ್ಯಾಖ್ಯಾನ ಬೇರೆ ಬೇರೆ ಇರುತ್ತದೆ,ತಂದೆಯ ಪ್ರೀತಿ,ತಾಯಿಯ ಮಮತೆ,ಭ್ರಾತೃ ಪ್ರೇಮ,ಸಹೋದರಿ ವಾತ್ಸಲ್ಯ,ಸ್ನೇಹಿತರ ಆತ್ಮೀಯತೆ ಇತ್ಯಾದಿ.ಪ್ರೀತಿಯ ವ್ಯಾಖ್ಯಾನದಲ್ಲಿ ಹೇಗೆ ವಿವಿಧತೆ ಇರುವುದೋ,ಅದೇ ರೀತಿ ನಮ್ಮ ಹೃದಯ ಮನಸ್ಸುಗಳಲ್ಲೂ ಪ್ರತಿಯೊಂದು ಸಂಬಂಧಕ್ಕೂ ಪ್ರತ್ಯೇಕ ಸ್ಥಾನವಿದೆಯಲ್ಲವೇ.ಹಾಗಾದರೆ ಏಕಕಾಲಕ್ಕೆ ಎಲ್ಲರನ್ನೂ ಪ್ರೀತಿಸುವುದು,ಆಧರಿಸುವುದು ಕಷ್ಟಸಾಧ್ಯವಂತೂ ಅಲ್ಲ.ನಮ್ಮ ಹೃದಯ ಮನಸ್ಸು ಅಷ್ಟು ಸಂಕುಚಿತವೇ?,ಹೊಸ ಸಂಬಂಧಗಳು ಬೆಸೆದಾಗ ಹಳೆಯ, ಹುಟ್ಟಿನಿಂದ ಬಂದ ಸಂಬಂಧಗಳನ್ನೂ ಕಡೆಗಾಣಿಸುವುದು ಸಮಂಜಸವೇ?ಕರ್ತವ್ಯ,ಜವಾಬ್ದಾರಿಗಳನ್ನು ನಿರ್ವಹಿಸದೇ,ಕಠಿಣ ಮನಸ್ಕರಾಗುವವರಿಗೆ ಆತ್ಮಸಾಕ್ಷಿ ಎಂಬುದಿಲ್ಲವೇ? ಅವರ ಮನಃಸಾಕ್ಷಿ ಅವರನ್ನು ದಿಕ್ಕರಿಸುವುದಿಲ್ಲವೇ? ಎಲ್ಲಾ ಕೈ ಮೀರಿ ಹೋದ ಮೇಲೆ ಪಶ್ಚಾತ್ತಾಪ ಪಟ್ಟರೆ,ಸ್ವ ಪ್ರಾಯಶ್ಚಿತ ಮಾಡಿಕೊಂಡರೆ,ನಡೆದು ಹೋದ ಘಟನೆಗಳನ್ನು ಮತ್ತೆ ಸರಿ ಮಾಡಲು ಸಾಧ್ಯವೇ? ಕಳೆದುಕೊಂಡ ಸಂಬಂಧ ಮತ್ತೆ ಬೆಸೆಯುವುದೇ? ಮುರಿದ ಮನಸ್ಸು ಮತ್ತೆ ಕೂಡುವುದೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕಾದಂಬರಿಯಲ್ಲಿದೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books