ಆಗಸ್ಟ್ ಒಂಬತ್ತು

Author : ಬಸವರಾಜ ಕಟ್ಟೀಮನಿ

Pages 136

₹ 1.00




Year of Publication: 1947
Published by: ಪ್ರಭಾತ ಸಾಹಿತ್ಯ
Address: ಬೆಂಗಳೂರು

Synopsys

ದೇಶದ ಸ್ವಾತಂತ್ಯ್ರಕ್ಕಾಗಿ ನಡೆದ ಆಗಸ್ಟ್ ಕ್ರಾಂತಿಯ ಹಿನ್ನೆಲೆಯಲ್ಲಿ ರಚನೆಯಾದ ಕಾದಂಬರಿ -’ಆಗಸ್ಟ್ ಒಂಬತ್ತು. ಬಸವರಾಜ ಕಟ್ಟೀಮನಿ ರಚಿಸಿದ್ದು, ಅವರೇ ಹೇಳಿದಂತೆ ಮಾಡಿ ಮಡಿದವರ ಹುತಾತ್ಮ ಕಥೆ ಇದು. ಗಾಂಧೀಜಿ ಅವರು ‘ಮಾಡು ಇಲ್ಲವೇ ಮಡಿ ’ ಎಂದು ನೀಡಿದ ಸಂದೇಶದ ಹಿನ್ನೆಲೆಯಲ್ಲಿ ಬಸವರಾಜ ಕಟ್ಟೀಮನಿ ಅವರು ಬರೆದ ರಕ್ತಧ್ವಜ, ಹುತಾತ್ಮ ಇತರೆ ಕಾದಂಬರಿಗಳಂತೆ ಆಗಸ್ಟ್ ಒಂಬತ್ತು ಕಾದಂಬರಿಯೂ ಅದೇ ಜಾಡಿನಲ್ಲಿ ಸಾಗುತ್ತದೆ. ಆದರೆ, ದೇಶದ ವಿವಿಧೆಡೆ ನಡೆದ ಘಟನೆಗಳು ತಮ್ಮ ಸ್ವರೂಪದಲ್ಲಿ ಬೇರೆ ಬೇರೆಯಾಗಿದ್ದರಿಂದ ಕಥೆಯೂ ನವೀನತೆ ಪಡೆದುಕೊಳ್ಳುವುದು ಇವರ ಕಾದಂಬರಿ ವೈಶಿಷ್ಟ್ಯ. ‘ನಮ್ಮ ವೀರ ಜನರು ನಿಜಕ್ಕೂ ಮಾಡಿದರು ಮತ್ತು ಮಡಿದರು’ ಎಂಬ ಸಂದೇಶವು ಈ ಕಾದಂಬರಿಯ ವಿಶೇಷತೆಯಾಗಿದೆ.

 

About the Author

ಬಸವರಾಜ ಕಟ್ಟೀಮನಿ
(05 October 1919 - 23 October 1989)

ಬಸವರಾಜ ಕಟ್ಟೀಮನಿಯವರು ಬದುಕು ಹಾಗೂ ಸಾಹಿತ್ಯದಲ್ಲೂ  ಕ್ರಾಂತಿಕಾರಿಯಾಗಿದ್ದರು. 1919 ಅಕ್ಟೋಬರ್‌ 5 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಲಾಮರಡಿ ಗ್ರಾಮದಲ್ಲಿ ಜನಿಸಿದರು. ಅವರ ಮೊದಲ ಕಥೆ ’ಕಾರವಾನ್’, ಕಟ್ಟೀಮನಿಯವರ ಮೊದಲೆರಡು ಕಾದಂಬರಿಗಳು ಸ್ವಾತಂತ್ರ್ಯ ಹೋರಾಟವನ್ನು ಕುರಿತಾಗಿ ಬರೆದಂಥವು. ಆ ಬಳಿಕ ಅವರು ಸಮಾಜದಲ್ಲಿ ನಡೆಯುತ್ತಿರುವ ಕಾರ್ಮಿಕ ಶೋಷಣೆ, ಸ್ತ್ರೀಶೋಷಣೆ, ಬಡವರ ಶೋಷಣೆ, ದಲಿತರ ಶೋಷಣೆ—ಇವೆಲ್ಲವಗಳ ವಿರುದ್ಧ ಕಟುವಾಗಿ ಬರೆದಿದ್ದಾರೆ.  ಕಥಾ ಸಂಕಲನ - ಸೆರೆಯಿಂದ ಹೊರಗೆ, ಆಗಸ್ಟ್ ಒಂಬತ್ತು, ಗುಲಾಬಿ ಹೂ, ಜೋಳದ ಬೆಳೆಯ ನಡುವೆ, ಜೀವನ ಕಲೆ, ಸುಂಟರಗಾಳಿ, ಸೈನಿಕನ ಹೆಂಡತಿ, ಹುಲಿಯಣ್ಣನ ಮಗಳು, ಗರಡಿಯಾಳು. ನಾಟಕ ...

READ MORE

Related Books