ವೀರಕೇಸರಿ ಅಮಟೂರು ಬಾಳಪ್ಪ

Author : ಬಾಳಾಸಾಹೇಬ ಲೋಕಾಪುರ

Pages 148

₹ 107.00




Year of Publication: 2020
Published by: ಕಣ್ವ ಪ್ರಕಾಶನ
Address: ಕಾಲಾ ಕನಸು ನಂ.894, 1ನೇ ಮುಖ್ಯರಸ್ತೆ, ನಿಸರ್ಗ ಬಡಾವಣೆ, ಚಂದ್ರಾಲೇಔಟ್, ಬೆಂಗಳೂರು- 560072
Phone: 08023206778

Synopsys

‘ವೀರಕೇಸರಿ ಅಮಟೂರು ಬಾಳಪ್ಪ’ ಲೇಖಕ ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿ. ಇದು ಕಿತ್ತೂರಿನ ವೀರ ಸೇನಾನಿ ಅಮಟೂರು ಬಾಳಪ್ಪ ಅವರ ಜೀವನ ಚರಿತ್ರೆಯಿಂದ ಸ್ಪೂರ್ತಿ ಪಡೆದ ಐತಿಹಾಸಿಕ ಕಾದಂಬರಿ. ಈ ಕೃತಿಗೆ ಲೇಖಕ ಡಾ. ಸರಜೂ ಕಾಟ್ಕರ್ ಅವರು ಬೆನ್ನುಡಿ ಬರೆದು ‘ಇತಿಹಾಸದಲ್ಲಿ ಕಳೆದು ಹೋದ ಒಂದು ಪುಟ ಅಮಟೂರು ಬಾಳಪ್ಪ. ಕಿತ್ತೂರ ಯುದ್ಧದ ಪ್ರಮುಖ ಪಾತ್ರಧಾರಿಯಾಗಿದ್ದ ಬಾಳಪ್ಪ ಜನರ ವಿಸ್ಮೃತಿಗೆ ಇತಿಹಾಸಕಾರರ ಅವಜ್ಞೆಗೆ ಬಲಿಯಾಗಿ ಅಜ್ಞಾತನಾಗಿ ಹೂತು ಹೋಗಿದ್ದ. ಕಿತ್ತೂರು-ಬ್ರಿಟಿಷ್ ಯುದ್ಧ ನಡೆದು ಕೇವಲ ಎರಡು ನೂರು ವರ್ಷಗಳಾಗಿವೆ. ಸಾವಿರಾರು ವರ್ಷಗಳ ಹಿಂದಿನ ಯುದ್ಧಗಳನ್ನು ನೆನಪಿಡುವ ನಾವು ಇಲ್ಲೇ ನಮ್ಮ ಪರಿಸರದಲ್ಲೇ ಹೆಚ್ಚೆಂದರೆ ನಮ್ಮ ಮುತ್ತಜ್ಜನ ಕಾಲದ ಇತಿಹಾಸವನ್ನು ಕತ್ತಲೆಗೆ ಹಾಕಿ ಬಿಟ್ಟಿದ್ದೇವೆ. ಬ್ರಿಟಿಷ್ ಕಲೆಕ್ಟರ್ ಥ್ಯಾಕರೆಯನ್ನು ಕೊಂದು ಕಿತ್ತೂರಿನ ಯುದ್ಧವನ್ನು ಗೆದ್ದವನು ಅಮಟೂರ ಬಾಳಪ್ಪ. ನಾವು ಕೊಲ್ಲಲ್ಪಟ್ಟ ಥ್ಯಾಕರೆಗೆ ಸ್ಮಾರಕ ಸಮಾಧಿಯನ್ನು ನಿರ್ಮಿಸಿದ್ದೇವೆ. ಆದರೆ ವೈರಿಯನ್ನು ಕೊಂದ ವೀರಬಾಳಪ್ಪ ಎಲ್ಲಿ ಹೇಗೆ ಸತ್ತನೆಂಬುದನ್ನು ಅರಿಯದಷ್ಟು ಅಜ್ಞರಾಗಿದ್ದೇವೆ ಎಂದು ಅಭಿಪ್ರಾಯಪಟ್ಟು ಕೃತಿಯ ಮಹತ್ವವನ್ನು ಪ್ರಶಂಸಿಸಿದ್ದಾರೆ. .

ಇತಿಹಾಸದಲ್ಲಿ ಮರೆತುಹೋದ ಈ ವೀರನ ಕಥೆಯನ್ನು ಹುಡುಕಿ ತೆಗೆದು ಬಾಳಪ್ಪನಿಗೆ ಮರುಜನ್ಮ ಕೊಟ್ಟವರು ಕಾದಂಬರಿಕಾರ ಬಾಳಾ ಸಾಹೇಬ ಲೋಕಾಪುರ. ಇಲ್ಲಿ ಅವರಿಗೆ ಸಿಕ್ಕಿದ್ದು ಕೇವಲ ಒಂದು ಎಳೆ ಮಾತ್ರ ಆ ಎಳೆಯನ್ನೇ ಬಾಳಾ ಸಾಹೇಬರು ಹಿಗ್ಗಿಸಿ ಅದಕ್ಕೆ ಕಾಲ್ಪನಿಕತೆಯ ಮೆರಗು ನೀಡಿ ಒಂದು ಅದ್ಭುತವಾದ ಕಥಾನಕವನ್ನು ನಮ್ಮ ಕಣ್ಣೆದುರು ನಿಲ್ಲಿಸಿದ್ದಾರೆ.

About the Author

ಬಾಳಾಸಾಹೇಬ ಲೋಕಾಪುರ

ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಶಿರಹಟ್ಟಿಯವರಾದ ಲೇಖಕ ಬಾಳಾಸಾಹೇಬ ಲೋಕಾಪುರ 1955ರಲ್ಲಿ ಜನಿಸಿದರು. ನವ್ಯೊತ್ತರ ಸಾಹಿತಿಗಳಾದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಭೂಗೋಳ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ‘ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ಜೈನ ಸಂವೇದನೆ’ ವಿಷಯದಲ್ಲಿ ಪಿಹೆಚ್ ಡಿ ಪಡೆದರು.  ಬಾಗಲಕೋಟೆಯ ಸಕ್ರಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕರಾದ ಇವರು ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕವಣಿಗಲ್ಲು, ಹಾರುವ ಹಕ್ಕಿ ಮತ್ತು ಆಕಾಶ, ತನು ಕರಗದವರಲ್ಲಿ, ಮತ್ತು ಕಂಗಳು ತುಂಬಿದ ಬಳಿಕ ಎಂಬ ಕತಾಸಂಕಲನಗಳು, ಉಧೊ ಉಧೊ, ಹುತ್ತ, ಬಿಸಿಲುಪುರ, ನೀಲಗಂಗಾ ಎಂಬ ಕಾದಂಬರಿಗಳು, ...

READ MORE

Related Books