ದಂಗೆ

Author : ಸರಜೂ ಕಾಟ್ಕರ್‌

Pages 160

₹ 180.00




Published by: ಯಾಜಿ ಪ್ರಕಾಶನ
Address: ಭೂಮಿ, ಪ್ರಕಾಶ್ ನಗರ್, ನಹರ್ ಕಾಲೋನಿ, ಹೊಸಪೇಟೆ, ಕರ್ನಾಟಕ
Phone: 09449922800

Synopsys

ಲೇಖಕ ಡಾ. ಸರಜೂ ಕಾಟ್ಕರ್ ಅವರ ಕಾದಂಬರಿ ’ದಂಗೆ’. ಬ್ರಿಟಿಷ್ ರಾಜ್ಯದಲ್ಲಿ ಸಂಸ್ಥಾನಿಕನೊಬ್ಬನು ತನ್ನ ಪ್ರಜೆಗಳ ಮೇಲೆ ನಡೆಸುವ ದಬ್ಬಾಳಿಕೆ, ಅನ್ಯಾಯ, ಅತ್ಯಾಚಾರ ಹಾಗೂ ಹಿಂಸೆಯನ್ನು ಪ್ರಜೆಗಳೇ ದಂಗೆ ಎದ್ದು ಅವನ ವಿರುದ್ಧ ತಿರುಗಿ ಬೀಳುವ ಕಥಾನಕವನ್ನು ಹೊಂದಿರುವ 'ದಂಗೆ' ಕಾದಂಬರಿ ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವನ್ನೂ ಚಿತ್ರಿಸುತ್ತದೆ. ಕಾದಂಬರಿಗೆ ಸುಪ್ರಸಿದ್ಧ ಕಾದಂಬರಿಕಾರ ಕುಂವೀ ಮುನ್ನುಡಿ ಬರೆದಿದ್ದು  ಪ್ರಸಿದ್ಧ ಕಾದಂಬರಿಕಾರರಾಗಿರುವ ರಾಘವೇಂದ್ರ ಪಾಟೀಲ, ಬಾಳಾಸಾಹೇಬ ಲೋಕಾಪುರ, ರೇಖಾ ಕಾಖಂಡಕಿ, ಪಿ ಚಂದ್ರಿಕಾ ಹಾಗೂ ಪ್ರಸಿದ್ಧ ಅನುವಾದಕರಾಗಿರುವ  ಚಂದ್ರಕಾಂತ ಪೋಕಳೆ ಮೊದಲ ಓದುಗರಾಗಿ ಅಭಿಪ್ರಾಯವನ್ನು ನೀಡಿದ್ದಾರೆ.
ಹೊಸಪೇಟೆಯ ಯಾಜಿ ಪ್ರಕಾಶನವು ಕಾದಂಬರಿಯನ್ನು ಸುಂದರವಾಗಿ ಪ್ರಕಾಶಿಸಿದ್ದಾರೆ. 

About the Author

ಸರಜೂ ಕಾಟ್ಕರ್‌
(14 August 1953)

ವೃತ್ತಿಯಲ್ಲಿ ಪತ್ರಕರ್ತರು ಆಗಿರುವ ಕವಿ ಸರಜೂ ಕಾಟ್ಕರ್ ಅವರು ಜನಿಸಿದ್ದು (1953 ಆಗಸ್ಟ್‌ 14ರಂದು) ಹುಬ್ಬಳ್ಳಿಯಲ್ಲಿ . ತಂದೆ ಹಣಮಂತರಾವ್, ತಾಯಿ ಗೌರಾಬಾಯಿ.  ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ (ಕನ್ನಡ) ಪದವೀಧರರು.ಕರ್ನಾಟಕ ವಿ.ವಿ.ಯಿಂದ ‘ಕನ್ನಡ-ಮರಾಠಿ ದಲಿತ ಸಾಹಿತ್ಯ: ಒಂದು ಅಧ್ಯಯನ’ ವಿಷಯವಾಗಿ (1994) ಪಿಎಚ್ ಡಿ ಪಡೆದರು. ಸಂಯುಕ್ತ ಕರ್ನಾಟಕದಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿ, ನಂತರ ಇಂಡಿಯನ್‌ ಎಕ್ಸ್‌ಪ್ರೆಸ್‌ ಬಳಗದ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರು ಸೇರಿದಂತೆ ಸರ್ಕಾರದ ಹಲವಾರು ಅಕಾಡೆಮಿ, ಸಮಿತಿ ಹೀಗೆ ವಿವಿಧ ಜವಾಬ್ದಾರಿತ ಸ್ಥಾನಗಳನ್ನು ನಿರ್ವಹಿಸಿದ್ದಾರೆ.  ಕೃತಿಗಳು: ಬೆಂಕಿ-ನೀರು, ಹಸಿದ ನೆಲ, ಸೂರ್ಯ, ...

READ MORE

Related Books