ಆಡಿಸಿದಳೇಶೋಧೆ

Author : ರೇಖಾ ಕಾಖಂಡಕಿ

Pages 157

₹ 40.00




Year of Publication: 1998
Published by: ಶ್ರೀ ಸೌಮ್ಯ ಪ್ರಕಾಶನ
Address: ನಂ 93, 3ನೇ ಮುಖ್ಯರಸ್ತೆ, 13ನೇ ಅಡ್ಡರಸ್ತೆ, ಭುವನೇಶ್ವರಿನಗರ ಕೆಂಪಾಪುರ ಅಗ್ರಹಾರ, ಮಾಗಡಿ ರಸ್ತೆ ಬೆಂಗಳೂರು-560023

Synopsys

ʼಆಡಿಸಿದಳೇಶೋಧೆʼ ಕಾದಂಬರಿಯು ಲೇಖಕಿ ರೇಖಾ ಕಾಖಂಡಕಿ ಅವರು ರಚಿಸಿದ್ದು, ಬದುಕಿನಲ್ಲಿ ಉದ್ಭವಿಸುವ ಅಲ್ಲೋಲ ಕಲ್ಲೋಲಗಳನ್ನು ತಾಳ್ಮೆಯಿಂದ ಧೃತಿಗೆಡದೆ ತಾನಂದುಕೊಂಡ ರೀತಿಯಲ್ಲಿ ಸಾಧಿಸುವ ಹೆಣ್ಣೊಬ್ಬಳ ಕತೆ ಇದು. ಬುದ್ದಿಮಾಂದ್ಯ ಹಾಗೂ ಅಂಗವಿಕಲ ಮಕ್ಕಳು ಅನುಭವಿಸುವ ಕಷ್ಟ, ಸಮಾಜ ಅವರನ್ನು ಕಾಣುವ ರೀತಿ ಕುರಿತು ಈ ಕಾದಂಬರಿ ಚಿತ್ರಿಸುತ್ತದೆ. ಸಮಾಜದ ನಕಾರಾತ್ಮಕತೆಗೆ ಹೆಚ್ಚು ಒತ್ತು ನೀಡಿದೆ.

About the Author

ರೇಖಾ ಕಾಖಂಡಕಿ
(09 June 1951)

ರೇಖಾ ಕಾಖಂಡಕಿಯವರು ಹಲವಾರು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ಅವರು ಮೂಲತಃ ಬಾಗಲಕೋಟೆಯವರು. ಇವರು ಬರೆದ ಕಥೆಗಳು ಮಲ್ಲಿಗೆ, ಜನಪ್ರಗತಿ, ಪ್ರಜಾಮತ ಮುಂತಾದ ಪತ್ರಿಕೆಗಳಲ್ಲಿ ಬೆಳಕು ಕಂಡವು. ಕಾಲೇಜು ಓದುತ್ತಿದ್ದಾಗ ಬರೆದ ಕೋಟಿ ಕಾದಂಬರಿಯು ಬಾಗಕೋಟೆಯ ಪರಿಸರದ ವಸ್ತು ಇರುವ ಕಾದಂಬರಿ. ಮಲ್ಲಿಗೆ ಮಾಸಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯಿತು. ನಂತರ ಬರೆದ ಕಾದಂಬರಿಗಳು ಬಂಧನ, ಅರುಣರಾಗ, ಹೊಸಹೆಜ್ಜೆ ಮುಂತಾದವುಗಳು. ಇವರ ಹಲವಾರು ಕಾದಂಬರಿಗಳಲ್ಲಿ ಪ್ರಾದೇಶಿಕ ಭಾಷೆಯ ಸೊಗಡು, ದಟ್ಟ ಅನುಭವ, ಸಾಮಾಜಿಕ ಸ್ಥಿತ್ಯಂತರಗಳು ಮುಂತಾದವುಗಳೇ ವೈವಿಧ್ಯಮಯ ವಸ್ತುಗಳಾಗಿ, ಮೂಲದ್ರವ್ಯಗಳಾಗಿ ಪ್ರಕಟಗೊಂಡಿವೆ. ಆರುಣರಾಗ ಚಲನಚಿತ್ರವಾಗಿ ಪ್ರಖ್ಯಾತಿ ಪಡೆದಿದ್ದರೆ ಲಂಬಾಣಿಗಳ ...

READ MORE

Related Books