ಮೊಗ್ಗರಳಿ ಹೂವಾಗಿ

Author : ಶೈಲಜಾ ಸುರೇಶ್

Pages 300

₹ 250.00




Year of Publication: 2012
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: #134, 8ನೇ ಕ್ರಾಸ್, 4ನೇ ಮುಖ್ಯರಸ್ತೆ, ಗೋವಿಂದರಾಜ ನಗರ, ಬೆಂಗಳೂರು-560040

Synopsys

‘ಮೊಗ್ಗರಳಿ ಹೂವಾಗಿ’ ಶೈಲಜಾ ಸುರೇಶ ಅವರ ಸಂಪಾದಿತ ಕಥಾ ಸಂಕಲನ.ಲೇಖಿಕಾ ಸಾಹಿತ್ಯ ವೇದಿಕೆಯ ದಶಮಾನೋತ್ಸವ ನಿಮಿತ್ತ ’ಲೇಖಿಕಾ ಶ್ರೀ’ ಪ್ರಶಸ್ತಿಗಾಗಿ ಆಯೋಜಿಸಿದ್ದ ಸ್ಫರ್ಧೆಯಲ್ಲಿ ಬಂದಿದ್ದ ಕಥೆಗಳ ಪೈಕಿ ಬಹುಮಾನಿತ ಹಾಗೂ ಉತ್ತಮ ಕಥೆಗಳನ್ನು ಆಯ್ದು, ಸಂಕಲನ ರೂಪದಲ್ಲಿ ನೀಡಿದ ಕೃತಿಯೇ ’ಮೊಗ್ಗರಳಿ ಹೂವಾಗಿ’. 

ಚೆನ್ನಪ್ಪ ಅಂಗಡಿ ಅವರ ಭವದ ಬೀಜ ಮೊಳೆವಲ್ಲಿ, ಮಂಗಳಾ ಪ್ರಸಾದರ ಕಪ್ಪುಕಂಬಳಿ, ಎಸ್. ಶೇಖರಗೌಡರ ದೀಪಾವಳಿ, ಗೋಪಿ ವಲ್ಲಭರ ದಾರಿದೀಪ (ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ)  ಬಹುಮಾನಿತ ಕಥೆಗಳು ಸೇರಿದಂತೆ ಒಟ್ಟು 20 ಕಥೆಗಳು ಸಂಕಲನದಲ್ಲಿವೆ.

About the Author

ಶೈಲಜಾ ಸುರೇಶ್
(02 October 1964)

ಶೈಲಜಾ ಸುರೇಶ್ (ದಾಕ್ಷಾಯಿಣಿ ಎಚ್.), ಬಿ.ಎ. ಪದವೀಧರರು.  1964ರ ಅಕ್ಟೋಬರ್ 2 ರಂದು ಹಾಸನದಲ್ಲಿ ಜನನ. ತಂದೆ  ಹೆಚ್. ಹನುಮಂತಪ್ಪ, ತಾಯಿ- ಸಾವಿತ್ರಮ್ಮ. ಕಾದಂಬರಿ : ಇಂದಿರಾ 2004, ಹೃದಯರಾಗ 2006, ಬಾಳಿನ ಹೊಂಬೆಳಕು 2008,  ಕಥಾಸಂಕಲನ : ಹೊಂಗನಸು 2012ರಲ್ಲಿ ಪ್ರಕಟವಾಗಿವೆ. ಸಣ್ಣಕತೆ ಹಾಗೂ ನಾಟಕಗಳನ್ನು ರಚಿಸಿದ್ದು ಹವ್ಯಾಸಿ ಪತ್ರಕರ್ತೆ ಕೂಡ. ಆಕಾಶವಾಣಿ, ದೂರದರ್ಶನಕ್ಕಾಗಿ ಹಲವು ಬರೆಹಗಳನ್ನು ನೀಡಿದ್ದಾರೆ. ಅವರು ಲೇಖಕಿಯರ ಸಾಹಿತ್ಯ ವೇದಿಕೆಯ ಅಧ್ಯಕ್ಷರು. ಇವರಿಗೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ದೇವರ ದಾಸಿಮಯ್ಯ ಪ್ರಶಸ್ತಿ, ಸಾಹಿತ್ಯ ಸೇತು ಪ್ರಶಸ್ತಿ, ಗೌರವಹುದ್ದೆ : ಹಾಸನ ಜಿಲ್ಲಾ ಕನ್ನಡ ಲೇಖಕಿಯರ ...

READ MORE

Related Books