ಕನ್ನಮರಿ

Author : ಕೃಷ್ಣಮೂರ್ತಿ ಹನೂರು

Pages 212

₹ 230.00




Year of Publication: 2023
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

‘ಕನ್ನಮರಿ’ ಕೃತಿಯು ಕೃಷ್ಣಮೂರ್ತಿ ಹನೂರು ಅವರ ಕಾದಂಬರಿಯಾಗಿದೆ. ಈ ಕೃತಿಯ ಕುರಿತು ಮನು ವಿ ದೇವದೇವನ್ ಅವರ ಹೀಗೆ ಹೇಳುತ್ತಾರೆ; ಇದು ವಚನಕಾರ ಕನ್ನದ ಮಾರಯ್ಯನನ್ನು ನೆನಪಿಸುವ ಕನ್ನಮಾರಿ ಜನಾಂಗಕ್ಕೆ ಸೇರಿದ ಕನ್ನಮರಿ ಎಂಬ ಹುಡುಗನ ಕಥೆ.ಶಾಲೆ ಕಲಿತ ಹುಡುಗ ಕಾನುಸೀಮೆಯ ತನ್ನ ನೆಲೆ ಬಿಟ್ಟು ಅಕ್ಷರದ ಹಾದಿಯಲ್ಲಿ ನಗರ ಸೇರಿ ಅನೇಕ ವಿಲಕ್ಷಣ ಅನುಭವಗಳ ಬಳಿಕ ತಿರುಗಿ ತನ್ನ ಪೂರ್ವ ನೆಲೆಗೆ ಮರಳಿ ಬರುವ ಒಗಟಿನಂಥ ಬದುಕಿನ ಕಥನವಿದು.ಒಂದರ್ಥದಲ್ಲಿ ಧರ್ಮ,ಅರ್ಥ,ಕಾಮ,ಮೋಕ್ಷವೆಂಬ ನಾಲ್ಕೂ ಪುರುಷಾರ್ಥಗಳನ್ನು ನಿರಾಕರಿಸಿ ಬದುಕನ್ನು ಮತ್ತೊಮ್ಮೆ ಆರಂಭದಿಂದ ಕಟ್ಟಿಕೊಳ್ಳುವ ಹೊರಟ ಯುವಕನ ಕಥೆಯಿದು ಎನ್ನಬಹುದು. ಇನ್ನೊಂದರ್ಥದಲ್ಲಿ ಈ ಪುರುಷಾರ್ಥಗಳ ಬಾಹ್ಯರ್ಥವನ್ನು ಮಾತ್ರ ಕಂಡರಿತ ಕನ್ನಮರಿ ಅವುಗಳ ಅಂತರಾರ್ಥದ ಕಡೆಗೆ ತಿರುಗಲು ನಿರ್ಧರಿಸಿದ ಕಥೆ ಎಂದೂ ಹೇಳಬಹುದು.ತನ್ನ ವಿದ್ಯಾರ್ಥಿಯಾಗಿದ್ದ ಕನ್ನಮರಿಯನ್ನು ಹಲವು ನೆಲೆಗಳಲ್ಲಿ ಹುಡುಕುತ್ತ ಹೊರಟ ಗುರುನಾಥ ಉಪಾಧ್ಯರ ಅನುಭವಗಳ ಮೂಲಕ ಮುಂದೆ ಸಾಗುವ ಕೃತಿ ತನ್ನ ಸರಳತೆಯಲ್ಲೇ ಅನನ್ಯವಾದ ಭಾವಪ್ರಪಂಚವೊಂದನ್ನು ಕಟ್ಟಿಕೊಡುತ್ತದೆ.ಹನೂರರ 'ಕನ್ನಮರಿ' ಕನ್ನಡ ಕಾದಂಬರಿ ಕ್ರಮವನ್ನು ಎತ್ತರಕ್ಕೆ ಏರಿಸುವ ಮಹತ್ವದ ರಚನೆಯಾಗಿದೆ ಹನೂರರ ಹಾಗೆ ಕನ್ನಡ ವಾಗ್ಮಯ ಲೋಕವನ್ನು ಆಳದಿಂದ ಬಲ್ಲವರು ವಿರಳ. ಈ ಕೃತಿ ಅವರ ಸಹಜ ಕಥನಕಲೆಗೆ ಮಾತ್ರ ಸಾಧ್ಯವಾಗುವ ಸಾಧನೆ.

About the Author

ಕೃಷ್ಣಮೂರ್ತಿ ಹನೂರು

ಜಾನಪದ ತಜ್ಞ, ಕತೆಗಾರ, ಕಾದಂಬರಿಕಾರ ಕೃಷ್ಣಮೂರ್ತಿ ಹನೂರು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಮಾಡಿ ಸಂದರ್ಶಕ ಪ್ರಾಧ್ಯಾಪಕರಾಗಿ. 40 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಆಜ್ಞಾತನೊಬ್ಬನ ಆತ್ಮ ಚರಿತ್ರೆ ಕಾದಂಬರಿ ಓದುಗರ ಮೇರೆಯಿಲ್ಲದ ಮೆಚ್ಚುಗೆ ಪಡೆದಿದೆ. ಅದೀಗ ಇಂಗ್ಲೀಷ್ ಗೆ ಅನುವಾದಗೊಂಡು ಪ್ರಕಟವಾಗಿದೆ. ಕೇರಿಗೆ ಬಂದ ಹೋರಿ, ಕತ್ತಲಲ್ಲಿ ಕಂಡ ಮುಖ ಮತ್ತು ಕಳೆದ ಮಂಗಳವಾರ ಮುಸ್ಸಂಜೆ ಅವರ ಕಥಾಸಂಕಲನಗಳು. ಬಾರೋ ಗೀಜಗನೆ, ನಿಕ್ಷೇಪ ಅವರ ಕಾದಂಬರಿಗಳು. ಜಾನಪದಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ಅವರು ಸಂಪಾದಿಸಿದ ವಿಶ್ವಕೋಶ ಎನ್ ಸೈಕ್ಲೋಪೀಡಿಯಾ ಆಫ್ ಫೋಕ್ ಕಲ್ಚರ್ ...

READ MORE

Related Books