ಟಿಪ್ಪುಸುಲ್ತಾನನ ಕಾಲಘಟ್ಟದಲ್ಲಿ ಓರ್ವ ಗೂಢಾಚಾರಿಯ ಮಗ ಮತ್ತು ಪಾಳೇಗಾರನ ಮಗಳ ನಡುವೆ ಮೂಡುವ ಪ್ರೇಮದ ಕತೆಯಿದು. ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಅಂತಸ್ತುಗಳು ಪ್ರೇಮಿಗಳ ಮೇಲೆ ಪ್ರಭಾವಬೀರದಿರಲು ಸಾಧ್ಯವೇ ಎಂಬ ಸಾಂದರ್ಭಿಕ ಚರ್ಚೆಗಳು ಇದರಲ್ಲಿವೆ. ಇವೆಲ್ಲದರ ಹೊರತಾಗಿ ಮರಾಠರು ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ್ದು, ಟಿಪ್ಪುಸುಲ್ತಾನನ ಸಾವು ಕರ್ಣಾಟಕದಲ್ಲಿ ಬೀರಿದ ಪ್ರಭಾವಗಳೂ ಕೂಡಾ ಕಥೆಯ ಮುಖ್ಯ ಭಾಗವೇ ಆಗಿವೆ.
ಲೇಖಕ, ನಾಟಕಕಾರ, ಚಲನಚಿತ್ರ- ಸಂಗೀತ ನಿರ್ದೇಶಕ ಯೋಗೇಶ್ ಮಾಸ್ಟರ್ ಅವರು ಜನಪ್ರಿಯ-ಪ್ರಮುಖ ಲೇಖಕರು. ಕಾದಂಬರಿ-ನಾಟಕ-ಕವಿತೆ-ಮಕ್ಕಳ ಸಾಹಿತ್ಯ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವ ಮಾಸ್ಟರ್ ಅವರು ಇದುವರೆಗೆ 230ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ...
READ MORE