"ಮೇಘವರ್ಷಿಣಿ" ಕಾದಂಬರಿಯಲ್ಲಿ ಬದುಕಿನ ಆದರ್ಶ,ನೀತಿ ಅಳವಡಿಸಲಾಗಿದೆ.ಈಗಿನ ಮಕ್ಕಳು ಆಧುನಿಕತೆಯ ಹೆಸರಿನಲ್ಲಿ, ದುಶ್ಚಟಗಳ ದಾಸರಾಗುವ,ಅದರಿಂದ ಮುಕ್ತವಾಗಲು ಎಷ್ಟು ಕಷ್ಟ, ಎಂಬ ಅರಿವು ಅವರಿಗಿಲ್ಲದೆ ಮತ್ತಷ್ಟೂ ದಾಸರಾಗುತ್ತಾರೆ.ಆ ವ್ಯಸನದಿಂದ ಮಕ್ಕಳನ್ನು ಹೊರಗೆ ತರಲು ತಂದೆ ತಾಯಿ ಪಡುವ ಶ್ರಮ ವನ್ನು ಸ್ಪಷ್ಟವಾಗಿ ಈ ಕೃತಿಯಲ್ಲಿ ಚಿತ್ರಿತವಾಗಿದೆ.ಈ ಕಾದಂಬರಿಯಲ್ಲಿ ಭೂಮಿಕಾ ಮತ್ತು ಮೆಹತಾ ಪಾತ್ರ ಓದುಗರನ್ನು ಇನ್ನಷ್ಟು ಹತ್ತಿರವಾಗುತ್ತದೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...
READ MORE