ನರವೀರ ಕಾಸೀಮ

Author : ಭಿ.ಪ. ಕಾಳೆ

Pages 253




Year of Publication: 1932
Published by: ಭಿ.ಪ. ಕಾಳೆ
Address: ಶ್ರೀ ಶೇಷಾಚಲ ಆನಂದವನ (ಅಗಡಿ), ಹಾವೇರಿ.

Synopsys

ಭಿ.ಪ. ಕಾಳೆ ಅವರು ಬರೆದ ಐತಿಹಾಸಿಕ ಕಾದಂಬರಿ-ನರವೀರ ಕಾಸೀಮ. ಟಿಪ್ಪು ಸುಲ್ತಾನನು ತೀರಿ ಹೋದ ಬಳಿಕ ಆತನ ಆತ್ಮೀಯನಾಗಿದ್ದ ಕಾಸೀಮನು ಬ್ರಿಟಿಷರೊಡಗೂಡಿ ಐಷಾರಾಮಿ ಜೀವನ ಸಾಗಿಸಬಹುದಿತ್ತು. ಆದರೆ, ಹಾಗೇ ಮಾಡದೇ ಟಿಪ್ಪು ಸಾವಿನ ನಂತರವೂ ಆತನ ವ್ಯಕ್ತಿತ್ವಕ್ಕೆ ವಿಧೆಯನಾಗಿದ್ದನು. ಇಂತಹ ಸ್ವಾಮಿನಿಷ್ಠೆ ಕಾಸೀಮನ ಕುರಿತು ಬರೆದ ಕಾದಂಬರಿ.

About the Author

ಭಿ.ಪ. ಕಾಳೆ
(20 January 1889)

ಭಿಕಾಜಿಪಂತ ಕಾಳೆ ಎಂಬುದು  ಪೂರ್ಣ ಹೆಸರು. ಭಿ.ಪ.ಕಾಳೆ ಎಂದೇ ಖ್ಯಾತಿ. ಹೆಸರಾಂತ ಕಾದಂಬರಿಕಾರರು. ಪ್ರಕಾಶಕ-ಮುದ್ರಕರೂ ಹೌದು. ತಂದೆ ಪರಶುರಾಮ ಪಂತ ಕಾಳೆ. ಧಾರವಾಡ ಜಿಲ್ಲೆಯ ಕುಂದುಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 1889ರ ಜನವರಿ 20ರಂದು ಹುಟ್ಟಿದರು. ಕುರಂದವಾಡ ಸಂಸ್ಥಾನಿಕರ ಅಧೀನದಲ್ಲಿದ್ದ ಈ ಪ್ರದೇಶ ಪಟವರ್ಧನ ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿತ್ತು. ಸಂಸ್ಥಾನಿಕರ ಮನೆ ಮಾತು ಮರಾಠಿ. ಆಡಳಿತದ ಭಾಷೆಯೂ ಮರಾಠಿ.  ಸಂಶಿ ಗ್ರಾಮವು ಮರಾಠಿಮಯವೇ ಆಗಿತ್ತು. ಮಹಾರಾಷ್ಟ್ರದಿಂದ ಪಟವರ್ಧನ ಸಂಸ್ಥಾನಕ್ಕೆ ಬಂದು ಅಲ್ಲಿಯ ಬೇರೆ ಬೇರೆ ಊರುಗಳಲ್ಲಿ ನೆಲಸಿದ ಚಿತ್ಪಾವನ (ಕೊಂಕಣಸ್ಥ) ಬ್ರಾಹ್ಮಣ ಮನೆತನಗಳಲ್ಲಿ ಕಾಳೆ ಕುಟುಂಬವೂ ಒಂದು. ಈ ಕುಂಟುಂಬ ಸಾಂಸಿಯಲ್ಲಿ ...

READ MORE

Related Books