ರಾಜಾ ಸುರಪುರದ ವೆಂಕಟಪ್ಪನಾಯಕ

Author : ಬಿ.ಎಲ್.ವೇಣು

₹ 300.00




Year of Publication: 2021
Published by: ಗೀತಾಂಜಲಿ ಪುಸ್ತಕ ಪ್ರಕಾಶನ,
Address: ಶಿವಮೊಗ್ಗ

Synopsys

ಸುರಪುರದ ರಾಜಾ ವೆಂಕಟಪ್ಪನಾಯಕರ ಕುರಿತು ಖ್ಯಾತ ಕಾದಂಬರಿಕಾರ ಬಿ.ಎಲ್. ವೇಣು ಅವರ ಐತಿಹಾಸಿಕ ಕಾದಂಬರಿ-ರಾಜಾ ಸುರಪುರದ ವೆಂಕಟಪ್ಪನಾಯಕ. ಈಗಿನ ಯಾದಗಿರಿ ಜಿಲ್ಲೆಯ ಸುರಪುರದ ಸಂಸ್ಥಾನವು ಬೇಡ ಜನಾಂಗ ಪ್ರಾಬಲ್ಯದ ನಾಡು. ಮೊಗಲ್ ಸಾಮ್ರಾಜ್ಯದ ಅರಸ ಔರಂಗಜೇಬನನ್ನೂ ಸಹ ಸೋಲಿಸಿ, ಬೆದರಿಕೆ ಹುಟ್ಟಿಸಿದ ಸಂಸ್ಥಾನವಿದು. ಬ್ರಿಟಿಷರ ವಿರುದ್ಧವೂ ಹೋರಾಡಿ ತನ್ನ ಸಂಸ್ಥಾನವನ್ನು ಕಾಯ್ದುಕೊಂಡಿತ್ತು. ಬ್ರಿಟನ್ನಿನ ಬರ್ನಿಂಗ್ ಹ್ಯಾಂ ಕಟ್ಟಡವನ್ನು ಹೋಲುವ ಸುರಪುರ ರಾಜರ ಅರಮನೆ ಇಲ್ಲಿದೆ. ಯುದ್ಧಕ್ಕೆ ಹೇಳಿ ಮಾಡಿಸಿದ ಬೇಡರ ಇಲ್ಲಿದ್ದರು. ಹೀಗಾಗಿ, ಸುರಪುರ ಸಂಸ್ಥಾನದೊಂದಿಗೆ ಯುದ್ಧ ಮಾಡುವ ಮುನ್ನ ಬಹುತೇಕ ಅರಸರು ಯೋಚಿಸುವಂತೆ ಮಾಡಿತ್ತು. ಇಂತಹ ಇತಿಹಾಸದ ಸುರಪುರ ಸಂಸ್ಥಾನ ಕುರಿತು ಬರೆದ ಕಾದಂಬರಿ ಇದು.

About the Author

ಬಿ.ಎಲ್.ವೇಣು
(05 May 1945)

ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ. ಬಣ್ಣಗಳು, ದೊಡ್ಡ ಮನೆ, ಪ್ರೇಮ ಮದುವೆ ಮತ್ತು ಶೀಲ, ನೀಲವರ್ಣ, ದಲಿತಾವತಾರ, ಬಣ್ಣದ ಗೊಂಬಿ (ಕಥಾ ಸಂಕಲನಗಳು), ಪರಾಜಿತ, ಪ್ರೇಮಪರ್ವ, ಅಜೇಯ, ಬೆತ್ತಲೆ ಸೇವೆ, ಅತಂತ್ರರು, ಗಂಡುಗಲಿ ಮದಕರಿ ನಾಯಕ, ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ, ಕಲ್ಲರಳಿ ಹೂವಾಗಿ, ಕ್ರಾಂತಿಯೋಗಿ ಮರುಳಸಿದ್ದ, ಹೆಬ್ಬುಲಿ ಹಿರೇಮದಕರಿನಾಯಕ (ಮುಂತಾದ 26 ಕಾದಂಬರಿಗಳು), ಸಹೃದಯಿ, ಬೇರುಬಿಟ್ಟವರು, ಶೋಧನೆ, ವೀರವನಿತೆ ಓಬವ್ವ, ಕ್ರಾಂತಿ (ಮಿನಿ ಕಾದಂಬರಿಗಳು), ಯಮಲೋಕದಲ್ಲಿ ಮಾನವ, ಭೂಲೋಕಕ್ಕೆ ಬಂದ ಬಸವಣ್ಣ, ...

READ MORE

Related Books