ಜೀಕೆ ಮಾಸ್ತರರ ಪ್ರಣಯ ಪ್ರಸಂಗ

Author : ಚಂದ್ರಶೇಖರ ಕಂಬಾರ

Pages 64

₹ 50.00




Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
Phone: 26617100, 26617755

Synopsys

ಚಂದ್ರಶೇಖರ ಕಂಬಾರರ ಕಿರುಕಾದಂಬರಿ ’ಜೀಕೆ ಮಾಸ್ತರರ ಪ್ರಣಯ ಪ್ರಸಂಗ’. ಪ್ರೀತಿ-ಪ್ರೇಮ-ಪ್ರಣಯ ಪ್ರಸಂಗವನ್ನು ನವಿರಾದ ಭಾಷೆಯಲ್ಲಿ ಚಿತ್ರಿತವಾಗಿದೆ. ವಿದ್ಯಾರ್ಥಿಗಳಿಗೆ ಪ್ರಿಯರಾಗಿದ್ದ ಜೀಕೆ ಮಾಸ್ತರರು ಪ್ರೀತಿಯ ಸುಳಿಗೆ ಸಿಲುಕಿದ ಪ್ರಸಂಗ ಕಥಾಹಂದರದಲ್ಲಿದೆ. ಕಾದಂಬರಿಯ ಒಂದು ಭಾಗ ಅದರ ಸ್ವರೂಪವನ್ನು ನೀಡುತ್ತದೆ.

’ಪ್ರೇಮಕ್ಕೆ ದಿವ್ಯಶಕ್ತಿಯನ್ನಿತ್ತು ಅದನ್ನು ಮಾನವ ಹೃದಯದಲ್ಲಿಟ್ಟ ಶಿವಲಿಂಗ ದೇವರ ಮಹಿಮೆಗೆ ಶರಣು ಹೇಳೋಣ. ಒಣ ನೆಲದಲ್ಲಿ ನೀರು ಚಿಮ್ಮೋದನ್ನು, ಉಸುಕಿನಲ್ಲಿ ಹಸಿರಾಡೋದನ್ನು, ಕಲ್ಲು ಕರಗುವುದನ್ನು ನಾವು ಪವಾಡ ಎನ್ನುತ್ತೇವೆ. ಜೀಕೆ ಮಾಸ್ತರರ ಹೃದಯದಲ್ಲಿ, ಅದು ಅಂಥ ವಯಸ್ಸಾದ ಹೃದಯದಲ್ಲಿ, ಪ್ರೇಮ ಪಲ್ಲವಿಸಿದ್ದನ್ನ, ಅದು ಹಾಹಾ ಅನ್ನುವುದರೊಳಗೆ ಹಬ್ಬಿ ಹೂ ಬಿಟ್ಟದ್ದನ್ನ ಪವಾಡವೇ ಎಂದು ನಾವು ಹೇಳಬಯಸುತ್ತೇವೆ..’

About the Author

ಚಂದ್ರಶೇಖರ ಕಂಬಾರ
(02 January 1937)

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ   ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ.  ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು.  ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.  ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು  ಪಿ.ಎಚ್.ಡಿ ಪದವಿಗಳನ್ನು ಪಡೆದರು.  ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು.  ಹಂಪಿಯ ...

READ MORE

Related Books