ಕಲ್ಯಾಣಸ್ವಾಮಿ

Author : ನಿರಂಜನ

Pages 240

₹ 1.00




Year of Publication: 1953
Published by: ಮೋಹನ ಪ್ರಕಾಶನ
Address: ಕೃಷ್ಣಮೂರ್ತಿಪುರಂ, ಮೈಸೂರು

Synopsys

ನಿರಂಜನ ಅವರು ಬರೆದ ಐತಿಹಾಸಿಕ ಕಾದಂಬರಿ-ಕಲ್ಯಾಣಸ್ವಾಮಿ. ಬ್ರಿಟಿಷರ ಪ್ರಕಾರ ಕೊಡಗು ಸೈನ್ಯದಲ್ಲಿ ದಳಪತಿಯಾಗಿದ್ದ ಕೊಡಗಿನ ಕಲ್ಯಾಣಪ್ಪ ಒಬ್ಬ ದರೋಡೆಕೋರ, ನರಪಿಶಾಚಿ. ಖಜಾನೆಯನ್ನು ಕೊಳ್ಳೆ ಹೊಡೆಯುವವನು. ತಮ್ಮ ವಿರುದ್ಧ ದಂಗೆ ಸಾರಿದವರಿಗೆ ಬ್ರಿಟಿಷರು ಹೀಗೆ ಹಣೆಪಟ್ಟಿ ಹಚ್ಚುತ್ತಿರುವುದು ಸಾಮಾನ್ಯವಾಗಿತ್ತು. ಕೊಡಗಿನ ಮೇಲೆ ಬ್ರಿಟಿಷರು ನಡೆಸಿದ ಯುದ್ಧ, ಅಲ್ಲಿಯ ಅರಸು ವೀರರಾಜೇಂದ್ರನಿಗೆ ಬಗೆದ ಬ್ರಿಟಿಷರ ದ್ರೋಹ, ಇದನ್ನು ವಿರೋಧಿಸಿದ ಕಲ್ಯಾಣಪ್ಪನಿಗೆ ಓಡಿಸಿದ್ದು, ಈತನ ಬಗ್ಗೆ ಜರ್ಮನ್ ರ ಹಾಗೂ ಬ್ರಿಟಿಷರ ದಾಖಲೆಗಳು ವಿಭಿನ್ನ. ಜನಸಾಮಾನ್ಯರ ಅಭಿಪ್ರಾಯಗಳು ಸಂಪೂರ್ಣ ವಿರುದ್ಧ. ಈ ಎಲ್ಲ ದಾಖಲೆಗಳ ಹಿನ್ನೆಲೆಯಲ್ಲಿ ಕಾದಂಬರಿಯ ಕಥಾವಸ್ತು ರೂಪಗೊಂಡಿದೆ.

About the Author

ನಿರಂಜನ
(15 June 1924 - 12 March 1992)

ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು.    ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...

READ MORE

Related Books