ಮರಾಟರ ಅಭ್ಯುದಯ

Author : ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)

Pages 258

₹ 3.00




Year of Publication: 1951
Published by: ಎಸ್.ಎಂ. ಜೊಯ್ಸಿ
Address: ಗಳಗನಾಥ ಸುರಸ ಗ್ರಂಥಮಾಲೆ, ಧಾರವಾಡ

Synopsys

ಖ್ಯಾತ ಕಾದಂಬರಿಕಾರ ಗಳಗನಾಥ ಅವರು ಬರೆದ ಕಾದಂಬರಿ-ಮರಾಟರ ಅಭ್ಯುದಯ. ಇದು ಐತಿಹಾಸಿಕ ಸಂಗತಿಗಳ ಕಾದಂಬರಿಯಾಗಿದ್ದು, 1`918, 1947 ರಲ್ಲಿ ಹೀಗೆ ಎರಡು ಆವೃತ್ತಿಗಳು ಮುದ್ರಿತವಾಗಿವೆ. ಅಫಜಲಖಾನ್ ಮರಣದ ನಂತರ, ಮಹಾರಾಷ್ಟ್ರ ರಾಜ್ಯದ ಅಭ್ಯುದಯ ಆರಂಭವಾಯಿತು. ಆದರೆ, ಅದಕ್ಕಿಂತ ಮುಂಚೆ ಅಫಜಲಖಾನ್ ನ ಆಡಳಿತ ದಬ್ಬಾಳಿಕೆಯಿಂದ ಔರಂಗಜೇಬನ ಅಧಿಕಾರದ ಚಾಲನೆಯಿಂದ ಮಹಾರಾಷ್ಟ್ರ ನಲುಗಿ ಹೋಗಿತ್ತು. ಇಂತಹ ಐತಿಹಾಸಿಕ ಸಂಗತಿಗಳನ್ನು ಒಗ್ಗೂಡಿಸಿ ಬರೆದ ಕಾದಂಬರಿ ಇದು.

About the Author

ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)
(05 January 1869 - 22 April 1922)

ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...

READ MORE

Related Books