ಹೇಮಾದ್ರಿ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 180

₹ 135.00




Year of Publication: 2004
Published by: ಸುಧಾ ಎಂಟರ್ ಪ್ರೈಸಸ್

Synopsys

ಕಾದಂಬರಿಕಾರ್ತಿ ಸಾಯಿಸುತೆ ಸಾಮಾಜಿಕ ಕಾದಂಬರಿ ಹೇಮಾದ್ರಿ. ಪ್ರಕೃತಿಯ ಮೂಲಕ ದೇವರು ನಮಗೆ ಬದುಕುವ ಪರಿಯನ್ನು ಬೋಧಿಸುತ್ತಲೇ ಇದ್ದಾನೆ. ಸಮುದ್ರದ ಕರೆಗಳನ್ನು ನೋಡಿ. ಮಾನವನ ಯಾವ ಪ್ರತಿಕ್ರಿಯೆಗೂ ಅಂಜದೆ, ಅಳುಕದೆ ಒಂದು ನಿಶ್ಚಲ ಸ್ಥಿತಿಯಲ್ಲಿ ತನ್ನ ಕೆಲಸವನ್ನು ಮಾಡುತ್ತಿರುತ್ತೆ, ಹಾಗೆಯೇ ಸಮುದ್ರದ ಮಧ್ಯೆ ಇರುವ ಬಂಡೆ ನೋಡಿ. ಅಲೆಗಳ ಸಪ್ಪಳಕ್ಕಾಗಿ ಯಾಗಲಿ, ಅಪ್ಪಳಿಸುವಿಕೆಗಾಗಲೀ ವಿಚಲಿತ ವಾಗುವುದಿಲ್ಲ. ಇದೆಲ್ಲ ಪ್ರಕೃತಿಯ ಮೂಲಕ ಮಾನವನಿಗೆ ಪಾಠ, ಅರ್ಥವಾದಾಗ ಬದುಕು ಸಾರ್ಥಕ. ಎಲ್ಲರ ಅರ್ಥೈಸಿಕೊಂಡಾಗ ನಮ್ಮ ಜೀವನದ ವಿಧಾನವೆ ಬದಲಾಗಿಬಿಡುತ್ತೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books