ʼಢುoಢೀ; ಅರಣ್ಯಕನೊಬ್ಬ ಗಣಪತಿಯಾದ ಕಥೆʼ ಕಾದಂಬರಿಯನ್ನು ಲೇಖಕ ಯೋಗೇಶ್ ಮಾಸ್ಟರ್ ರಚಿಸಿದ್ದಾರೆ. ಆದಿವಾಸಿ ಸಮಾಜದಿಂದ ಆಯ್ದುಕೊಂಡ ಲಕ್ಷಣಗಳು, ಅಚಾರ ವಿಚಾರಗಳು,ಪದ್ಧತಿಗಳನ್ನು ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ. ಇಲ್ಲಿನ ಕತೆ ಕಾಲ್ಪನಿಕವಾಗಿದ್ದರೂ ಜನರಿಗೆ ಸಂಬಂಧಿಸಿದ ಸತ್ಯಗಳು ಅಡಗಿಕೊಂಡಿವೆ. ಗನಪತಿ ಅರಣ್ಯ ಜನರಿಂದ ಅರಾಧಿಸಲ್ಪಟ್ಟ ದೇವತೆ. ಹೀಗಾಗಿ ಅರಣ್ಯದ ಜನರ ನಡುವೆ ಕತೆಯು ಸಾಗುತ್ತದೆ. ಗಣಪತಿಯ ಬಗೆಗೆ ಇಂಗ್ಲೀಷ್ ಹಾಗೂ ಕನ್ನಡದಲ್ಲಿರುವ ಹಲವಾರು ಸಾಹಿತ್ಯಗಳನ್ನು ಸಂಗ್ರಹಿಸಿ ಈ ಕಾದಂಬರಿಯನ್ನು ರಚಿಸಲಾಗಿದೆ ಎಂದು ಈ ಕೃತಿಯ ಮುನ್ನುಡಿಯಲ್ಲಿ ವಿವರಿಸಲಾಗಿದೆ. ಪುರಾಣದ ರೋಚಕತೆಯ ಜೊತೆಗೆ ಸಂಶೋಧನಾ ಸಾಹಿತ್ಯವನ್ನೂ ಮಿಶ್ರಿಸಿ ಲೇಖಕ ಯೋಗೇಶ್ ಮಾಸ್ಟರ್ ಕಥೆ ಹೆಣೆದಿದ್ದಾರೆ.
ಲೇಖಕ, ನಾಟಕಕಾರ, ಚಲನಚಿತ್ರ- ಸಂಗೀತ ನಿರ್ದೇಶಕ ಯೋಗೇಶ್ ಮಾಸ್ಟರ್ ಅವರು ಜನಪ್ರಿಯ-ಪ್ರಮುಖ ಲೇಖಕರು. ಕಾದಂಬರಿ-ನಾಟಕ-ಕವಿತೆ-ಮಕ್ಕಳ ಸಾಹಿತ್ಯ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವ ಮಾಸ್ಟರ್ ಅವರು ಇದುವರೆಗೆ 230ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ...
READ MORE