ಸಾಮ್ರಾಟನ ದರ್ಬಾರ

Author : ಸಿದ್ಧರಾಮ ಉಪ್ಪಿನ್

₹ 250.00




Year of Publication: 2021
Published by: ಬೆರಗು ಪ್ರಕಾಶನ
Address: ಕಡಣಿ 586009, ಆಲಮೇಲ ತಾಲೂಕು, ವಿಜಯಪುರ ಜಿಲ್ಲೆ
Phone: 7795341335

Synopsys

ಲೇಖಕ ಸಿದ್ಧರಾಮ ಉಪ್ಪಿನ ಅವರ ’ ಸಾಮ್ರಾಟನ ದರ್ಬಾರ’ ಕೃತಿಯು ಕಾದಂಬರಿಯಾಗಿದೆ. ಸದ್ಗುರು ಭೀಮಾಶಂಕರ ಮಹಾರಾಜರ ಜೀವನ ಶಕ್ತಿ ಆಧಾರಿತ ಈ ಕೃತಿ ಉತ್ತರ ಕರ್ನಾಟಕದ ದೇಸಿ ಸೊಗಡಿನಲ್ಲಿ ಭಿನ್ನವಾಗಿ ಮೂಡಿಬಂದಿದೆ. ಬರವಣಿಗೆಯಲ್ಲಿ ಕೃತ್ರಿಮತೆ ಇಲ್ಲ. ಭಾಷೆಯಲ್ಲಿ ಮಾಲಿನ್ಯವಿಲ್ಲ. ಸದಭಿರುಚಿಯ ಸಾಹಿತ್ಯ ಕೊಡುವ ಬರವಣಿಗೆ ಓದುಗರಿಗೆ ಭಾಷೆಯ ಮಹತ್ವನ್ನು ತೋರ್ಪಡಿಸುತ್ತದೆ. ಕಥೆ ಹೇಳುವ ರೀತಿ, ನಿರೂಪಣಾ ಶೈಲಿ ಆಕರ್ಷಕವಾಗಿದ್ದು ಸಾಹಿತ್ಯಾಸಕ್ತರಿಗೆ ಪುಸ್ತಕವನ್ನು ಇಡಿಯಾಗಿ ಓದುವಂತೆ ಮಾಡುತ್ತದೆ. ಮಹ್ಮದ್ ಸಾಹೇಬ ಮುಲ್ಲಾ ಅವರು ಈ ಕೃತಿಗೆ ‘ಭ್ರಾಂತಿಯು ಭವದ ಅಂಕುರವಿಹುದೊ! ಶಾಂತನಾಗು ಸತ್ಯಾಸತ್ಯವು ಇದುವೋ! ಕಾಂತ ಶ್ರೀ ಗುರು ಭೀಮ ಇಹ ವಳ ಹೊರಗೋ! ಏಕಾಂತ ಬಲಿಸಿ ನಿಶ್ಚಂತನ ಕೂಡೋ’ ಎಂದು ಕವನದ ಸಾಲುಗಳ ಮೂಲಕ ಬೆನ್ನುಡಿ ಬರೆದಿದ್ದಾರೆ.  

About the Author

ಸಿದ್ಧರಾಮ ಉಪ್ಪಿನ್
(06 June 1952)

ಹಿರಿಯ ಲೇಖಕ ಸಿದ್ಧರಾಮ ಉಪ್ಪಿನ ಮೂಲತಃ ಅವಿಭಜಿತ ವಿಜಯಪುರ ಜಿಲ್ಲೆಯ ಆಲಮೇಲದವರು.ಈಗ ಆಲಮೇಲವೇ ತಾಲೂಕು ಕೇಂದ್ರವಾಗಿದೆ.  ವೃತ್ತಿಯಿಂದ ಕೃಷಿಕರು. ಬರವಣಿಗೆ ಅವರ ಆಸಕ್ತಿದಾಯಕ ಕ್ಷೇತ್ರ. ಬಿ.ಕಾಂ ಶಿಕ್ಷಣವನ್ನು ಹುಬ್ಬಳ್ಳಿಯ ಜೆ.ಜಿ ವಾಣಿಜ್ಯ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. 1996 ರಿಂದ 1999 ರವರೆಗೆ ಕನ್ನಡಪ್ರಭ ತಾಲ್ಲೂಕು ವರದಿಗಾರರಾಗಿ, ಶ್ರೀ ದತ್ತ ನಾಟ್ಯ ವಸ್ತು ಭಂಡಾರದ ಸಂಚಾಲಕರಾಗಿ, ರಂಗ ಪರಿಕರ ಪ್ರಕಾಶನದ ಸಂಚಾಲಕರಾಗಿ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಹಲವಾರು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 1996 ರಿಂದ 1999 ರವರೆಗೆ ಶಹಾಪುರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ,  1998 ರಿಂದ 2001 ರವರೆಗೆ ತಾಲೂಕಿನ ಕನ್ನಡ ...

READ MORE

Related Books