ಗೆದ್ದ ದೊಡ್ಡಸ್ತಿಕೆ

Author : ಶಿವರಾಮ ಕಾರಂತ

Pages 304

₹ 125.00




Year of Publication: 2008
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

ಗೆದ್ದ ದೊಡ್ಡಸ್ತಿಕೆ- ಡಾ. ಕೆ. ಶಿವರಾಮ ಕಾರಂತರು ಬರೆದ ಕಾದಂಬರಿ. ನಾಗೇಂದ್ರ ಪ್ರಾಮಾಣಿಕ ವ್ಯಕ್ತಿ. ಈತನೇ ಕಥಾ ನಾಯಕ. ತನ್ನ ಚಿಕ್ಕಪ್ಪನಿಂದ ಅನ್ಯಾಯವಾದರೂ, ಪ್ರತಿಭಟಿಸುವ ಧೈರ್ಯವಿರದು. ಆದರೆ, ಗುಟ್ಟಿನಿಂದ ಈತನ ಗೆಳೆಯ ನಾಗನಂದನು ನಾಗೇಂದ್ರನಿಗೆ ಸಹಾಯ ಮಾಡುತ್ತಾನೆ. ತನ್ನ ಚಿಕ್ಕಪ್ಪನ ಮಗಳು ಮೀನಾಕ್ಷಿಯು ನಾಗೇಂದ್ರನನ್ನು ವಿವಾಹವಾಗಲು ಸಹಕರಿಸುತ್ತಾಳೆ.  ಅವರಿಗೊಂದು ತುಣುಕು ಕೃಷಿಕ ಭೂಮಿಯನ್ನು ತೆಗೆಯಿಸಿಕೊಟ್ಟು, ಆ ಭೂಮಿ ಊರ್ಜಿತಕ್ಕೆ ಬರುವ ತನಕ ಅವರ ಸಂಸಾರದ ಮತ್ತು ಕೃಷಿಗೆ ತಗಲುವ ಎಲ್ಲ ಖರ್ಚುವೆಚ್ಚಗಳನ್ನು ಭರಿಸಲು ವಿಶೇಷ ನೆರವನ್ನು ನೀಡುತ್ತಾನೆ. ಹೀಗೆ ತನ್ನ ಜೀವನವನ್ನುಳಿಸಿದ ಗೆಳೆಯನ ಜೀವನವನ್ನು ಹಸನುಗೊಳಿಸುವ ದೊಡ್ಡಸ್ತಿಕೆಯ ಗುಣವನ್ನು ಪ್ರತಿಯಾಗಿ ಪ್ರಾಮಾಣಿಕತೆ, ಶುದ್ದ ಹಸ್ತತೆ, ವಿಧೇಯತೆ, ವಿನಯ , ಉಪಕಾರ ಸ್ಮರಣೆಗಳಂಥ ಉತ್ತಮ ನಡವಳಿಕೆಗಳ ಮೂಲಕ ನಾಗೇಂದ್ರನು ತನ್ನ ದೊಡ್ಡಸ್ತಿಕೆಯನ್ನೂ ಮೆರೆಯುತ್ತಾನೆ. 

ಬೆಂಗಳೂರಿನ ರಾಜಲಕ್ಷ್ಮಿ ಪ್ರಕಾಶನವು 1979ರಲ್ಲಿ (ಪುಟ: 301) ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು. 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books