ಕನ್ಯಾ ಕುಮಾರಿಯರಿಗೆ

Author : ಎಂ.ಕೆ. ಇಂದಿರಾ

Pages 152

₹ 100.00




Year of Publication: 2020
Published by: ಇಂದಿರಾ ಪ್ರಕಾಶನ

Synopsys

ಕಾದಂಬರಿಗಾರ್ತಿ ಎಂ.ಕೆ.ಇಂದಿರಾ ಅವರ ಸಾಮಾಜಿಕ ಕಾದಂಬರಿ ಕನ್ಯಾ ಕುಮಾರಿಯರಿಗೆ. ‘ಕನ್ಯಾಕುಮಾರಿಯರಿಗೆ’- ಈ ಕೃತಿ ನನ್ನ ಅನೇಕ ಕಾದಂಬರಿಗಳಿಗಿಂತ ವಿಭಿನ್ನ ರೀತಿಯದು. ಇದರಲ್ಲಿ ಕಥಾನಾಯಕ ನಾಯಕಿಯರಿಲ್ಲ. ದುಃಖ-ದುಗುಡ ದುರಂತಗಳಿಲ್ಲ. ಇದರ ಹೆಸರೇ ಹೇಳುವಂತೆ ಇದು ತಾರುಣ್ಯದಲ್ಲಿ ವಿಹರಿಸುವ ಸ್ವಚ್ಛಂದ ಮನದ ಯುವತಿಯರಿಗೆ ಹಿತವೆನಿಸಬಹುದು. ಇದರಲ್ಲಿ ಏನೂ ಇಲ್ಲವೆಂದರೂ ಏನೋ ಇದೆ. ಏನಿದೆ ಎಂಬುದನ್ನು ಓದುಗರೇ ಹುಡುಕಿಕೊಳ್ಳಿ. ಸಮಕಾಲೀನ ಪ್ರಚಲಿತ ಸಮಸ್ಯೆಗಳನ್ನು ಕಲ್ಪನಾ ಸೂತ್ರದಲ್ಲಿ ಹಗುರವಾಗಿ ಹೆಣೆಯಲಾಗಿದೆ. ಇದು ಒಂದು ವಾಚನ ವಿಹಾರವೆನಿಸಿದರೂ ವಾಸ್ತವತೆಯ ನೆಲವನ್ನು ಬಿಟ್ಟಿಲ್ಲವೆಂದು ಹೇಳಬಲ್ಲೆ ಎಂಬುದಾಘಿ ಖುದ್ದು ಲೇಖಕಿಯೇ ಹೇಳಿಕೊಂಡಿದ್ದಾರೆ.

About the Author

ಎಂ.ಕೆ. ಇಂದಿರಾ
(05 January 1917 - 15 March 1994)

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು 05-01-1917 ರಂದು. ಊರು ಮಲೆನಾಡಿನ ತೀರ್ಥಹಳ್ಳಿ. ತಂದೆ ತರೀಕೆರೆ ಸೂರ್ಯನಾರಾಯಣ, ತಾಯಿ ಬನಶಂಕರಮ್ಮ. ಇಂದಿರಾ ಓದಿದ್ದು, ಕನ್ನಡ ಮಾಧ್ಯಮಿಕ ಶಾಲೆಯ  2ನೇಯ ತರಗತಿವರೆಗೆ ಮಾತ್ರ. ತಮ್ಮ 12 ವರ್ಷಕ್ಕೆ ಮದುವೆಯಾಯಿತು. ಅವರು ಬರೆಯಲು ಆರಂಭಿಸಿದ್ದು 1963ರಲ್ಲಿ. ತುಂಗಭದ್ರ ಅವರ ಮೊದಲ ಕೃತಿ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು.ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ"."ತುಂಗಭದ್ರೆ"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ...

READ MORE

Related Books